ಬೆಂಗಳೂರು: ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿರೋ ನಟ ದರ್ಶನ್ ಮೇಲೆ ದಿನಕ್ಕೊಂದು ಆರೋಪಗಳು ಕೇಳಿಬರ್ತಿವೆ. ಪಾರ್ಮ್ ಹೌಸ್ ನಲ್ಲಿ ವಿಶಿಷ್ಟ ಪ್ರಬೇಧದ ಬಾತುಕೋಳಿಯನ್ನ ಕಾನೂನು ಬಾಹಿರವಾಗಿ ಸಾಕಿರೋದು ಹಾಗೂ ರಾಜಕಾಲುವೆ ಒತ್ತುವರಿ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಗೂ ಆಪತ್ತು ಎದುರಾಗಿದ್ದು ಕಾನೂನಿನ ಕುಣಿಕೆ ಬಿಗಿಯಾಗ್ತಿದೆ. ಬಾತುಕೋಳಿ ಕೇಸ್ ನಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ತನಿಖೆಗಿಳಿದಿದ್ರೆ, ರಾಜಕಾಲುವೆ ಮೇಲೆ ಕಟ್ಟಿರೋ ಮನೆ ಡೆಮಾಲೀಷನ್ ಗೆ ಬಿಬಿಎಂಪಿ ಸಿದ್ದವಾಗ್ತಿದೆ.
ನಟ ದರ್ಶನ್ ಈಗಾಗ್ಲೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದು ಪೋಲೀಸ್ ತನಿಖೆ ಎದುರಿಸ್ತಿದ್ದಾರೆ. ಈ ಮಧ್ಯೆ ದರ್ಶನ್ ಗೆ ಮತ್ತೆರಡು ಸಂಕಷ್ಟ ಎದುರಾಗಿದ್ದು ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದು ಹಾಗೂ ರಾಜಕಾಲುವೆ ಒತ್ತುವರಿ ಟೆನ್ಷನ್ ಶುರುವಾಗಿದೆ. ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಅವರಿಗೂ ಕೂಡ ಸಂಕಷ್ಟ ಎದುರಾಗಿದೆ.
Masala Peanuts: ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ
ಮೈಸೂರು ಜಿಲ್ಲೆ ಟಿ ನರಸಿಪುರದ ಫಾರ್ಮ್ ಹೌಸ್ನಲ್ಲಿ ನಟ ದರ್ಶನ್ ಹಲವಾರು ಪ್ರಬೇಧದ ಪಕ್ಷಗಳನ್ನು ಸಾಕಿದ್ದಾರೆ. ಅದರಲ್ಲಿ ಬಾರ್ ಹೆಡೆಡ್ ಗೂಸ್ ಪಕ್ಷಿ ಕೂಡ ಒಂದು, ಇದು ವಿಶಿಷ್ಟ ಪ್ರಭೇದದ ಪಕ್ಷಿಯಾಗಿದ್ದು ಚಳಿಗಾಲದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಕಾನೂನು ಪ್ರಕಾರ ಈ ಪಕ್ಷಿಯನ್ನು ಸಾಕುವಂತಿಲ್ಲ.
ಆದರೆ ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಈ ಪಕ್ಷಿಯನ್ನು ಸಾಕಿದ್ದರು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ತಿಳಿದಿದ್ರು ದರ್ಶನ್ ವಿಚಾರಣೆ ನಡೆಸದೆ ಸುಮ್ಮನಾಗಿದ್ದರು. ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ಅವರನ್ನು ವಿಚಾರಣೆ ನಡೆಸಿ ಕೈತೊಳೆದುಕೊಂಡಿದ್ದರು. ಸದ್ಯ ಈ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದ್ದು, ಈ ಪ್ರಕರಣ ವಿಚಾರದಲ್ಲಿ ಚಾರ್ಜ್ ಶೀಟ್ ತಯಾರಿಸಲು ಪೊಲೀಸರು ಮುಂದಾಗಿದ್ದಾರೆ. ಒಂದು ವೇಳೆ ಈ ಪ್ರಕರಣಗಳಲ್ಲಿ ತಪ್ಪು ಸಾಬೀತಾದರೆ ದರ್ಶನ್ ಜೈಲು ವಾಸ ಪಕ್ಕಾ ಎನ್ನಲಾಗ್ತಿದೆ