ಬಳ್ಳಾರಿ: ನಟ ದರ್ಶನ್ ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಾ ಇದ್ದಾರೆ. ಈಗ ಅರ್ಜಿ ವಿಚಾರಣೆ ಮುಂದಕ್ಕೆ ಹೋದ ಬೆನ್ನಲ್ಲೇ ದರ್ಶನ್ ಇರುವ ಬಳ್ಳಾರಿ ಕೇಂದ್ರ ಕಾರಗೃಹಕ್ಕೆ ಅವರ ಪರ ವಕೀಲರು ಬಂದಿದ್ದಾರೆ. ನಂತರ ಮಾತನಾಡಿದ ಅವರು, ಸೆಷನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಸೆ. 27ರಂದು ವಿಚಾರಣೆ ಇದೆ.
ಶನಿವಾರ ಜಾಮೀನು ಅರ್ಜಿ ಹಾಕಿದ್ದು, ಪಬ್ಲಿಕ್ ಪ್ರಾಸಿಕ್ಯೂಷನ್ ಟೈಮ್ ತೆಗೆದುಕೊಂಡಿದ್ದಾರೆ. ಬೇಲ್ ಅರ್ಜಿ ರಿಜೆಕ್ಟ್ ಆದ್ರೆ ಹೈಕೋರ್ಟ್ಗೆ ಹೋಗ್ತೇವೆ. ನಮಗೆ ನೂರಕ್ಕೆ ನೂರು ಜಾಮೀನು ಸಿಗುತ್ತೆ ಎನ್ನುವ ವಿಶ್ವಾಸ ಇದೆ. ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ನಮಗೆ ಕೆಲವೊಂದು ಡೌಟ್ಸ್ ಇತ್ತು, ಎಲ್ಲಾ ಕ್ಲಾರಿಫಿಕೇಷನ್ ತಗೊಂಡಿದ್ದೇವೆ ಎಂದರು.
ರಾತ್ರಿ ಬಟ್ಟೆಯಿಲ್ಲದೇ ಮಲಗಿದ್ರೆ ಏನಾಗುತ್ತೆ..? ಇಲ್ಲಿದೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯಗಳು
ದರ್ಶನ್ಗೆ ಬೆನ್ನು ನೋವು ಹೆಚ್ಚಾಗಿದೆ. ಹೀಗಾಗಿ ಮೆಡಿಕಲ್ ಅವಕಾಶಗಳನ್ನ ಕನ್ಸಿಡರ್ ಮಾಡೋದಕ್ಕೆ ಜೈಲು ಅಧಿಕಾರಿಗಳಿಗೆ ಹೇಳಿದ್ದೇವೆ. ಬೇಸಿಕ್ ಮೂಲಭೂತ ಸೌಲಭ್ಯ ಕೊಡಿ ಅಂತಾ ಹೇಳಿದ್ದೇವೆ. ಹೊಸ ಮ್ಯಾನುವಲ್ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. 2021ರ ಮ್ಯಾನುವಲ್ ಪ್ರಕಾರ ಖೈದಿಗೆ ಮೂಲಭೂತ ಸೌಲಭ್ಯಗಳನ್ನ ಕೊಡಬೇಕಾಗ್ತದೆ. ಮೀಡಿಯಾದಲ್ಲಿ ಬರುತ್ತೆ ಎಂದು ಸೌಲಭ್ಯ ತಿರಸ್ಕಾರ ಮಾಡುವಂತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚೆ ಮಾಡೋದಾಗಿ ಜೈಲು ಅಧಿಕಾರಿ ಹೇಳಿದ್ದಾರೆ ಎಂದರು.