ಬೆಂಗಳೂರು: ಯಾರ ತುಷ್ಟೀಕರಣ ಮಾಡುವ ಅವಶ್ಯಕತೆ ನಮಗಿಲ್ಲ. ನಾವು ಯಾರ ತುಷ್ಟೀಕರಣವೂ ಮಾಡಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೇ ಈ ಥರ ಘಟನೆಗೆ ಕಾರಣವಾದ್ದರೂ ಶಿಕ್ಷೆ ಆಗಬೇಕು. ಇಂಥ ಘಟನೆ ಆಗಲು ಬಿಡಬಾರದು.
ಘರ್ಷಣೆ ಹಿಂಸೆಗಳಿಂದ ಯಾರಿಗೂ ಲಾಭವಿಲ್ಲ. ಯಾರ ತುಷ್ಟೀಕರಣವೂ ಇಲ್ಲ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಆಗಬೇಕು. ಕಾಂಪ್ರಮೈಸ್ ಆಗಬಾರದು ಎಂದು ತಿಳಿಸಿದ್ದಾರೆ.
Viagra: ಗಮನಿಸಿ.. ಈ ಸಮಸ್ಯೆ ಇರುವ ಪುರುಷರು ವಯಾಗ್ರ ತೆಗೆದುಕೊಳ್ಳಬಾರದು ಗೊತ್ತಾ..?
ಪೊಲೀಸರೂ ಕೂಡ ಸ್ಪಷ್ಟವಾಗಿ ನೋಡಬೇಕಾಗುತ್ತದೆ. ಎಲ್ಲವನ್ನೂ ಕೂಡ ತನಿಖೆ ಮಾಡಬೇಕಾಗುತ್ತದೆ. ಪ್ರಚೋದನಕಾರಿ ಮಾತುಗಳು ಬೇಡ. ಲಕ್ಷಾಂತರ ಗಣಪತಿ ಕೂರಿಸ್ತಾರೆ. ಶೋಭಾ ಕರಂದ್ಲಾಜೆಯದ್ದೂ ಯಾವಾಗಲೂ ಇದೇ ಕಥೆ. ಬೆಂಕಿ ಹಚ್ಚುವುದರಲ್ಲಿ ಅವರೇ ಮುಂಚೂಣಿಯಲ್ಲಿರ್ತಾರೆ ಅಲ್ವ ಎಂದು ಕುಟುಕಿದ್ದಾರೆ.