ಬೆಂಗಳೂರು: ಎರಡು ವರ್ಷದ ಹಿಂದೆ ಯುವತಿ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೆಳಿಸಿತ್ತು .ಈಗ ಅಂಥದ್ದೇ ಒಂದು ಘಟನೆ ನಡೆದಿದ್ದು ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ..ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದ್ದ ಯುವಕನ ಮೇಲೆ ಆ್ಯಸಿಡ್ ದಾಳಿಯಾಗಿದೆ…ಈ ಆ್ಯಸಿಡ್ ಅಟ್ಯಾಕ್ ಹಿಂದೆ ಯುವತಿಯ ನೆರಳು ಇರೊ ಅನುಮಾನ ವ್ಯಕ್ತವಾಗ್ತಿದೆ..
CT Ravi: ಮುನಿರತ್ನ ವಿರುದ್ಧ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ: CT ರವಿ!
ಹೌದು..2022 ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೀತಿ ನಿರಾಕರಣೆ ಮಾಡಿದ್ದ ಯುವತಿ ಮೇಲೆ ನಾಗೇಶ್ ಎಂಬ ಪಾಪಿ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ..ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು..ಸದ್ಯ ಇದೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಆ್ಯಸಿಡ್ ದಾಳಿಯಾಗಿದೆ..ಸೆಪ್ಟೆಂಬರ್ 22 ರ ಮದ್ಯಾಹ್ನ ಸುಮಾರು 2 ಗಂಟೆಯ ಸಮಯ..ಸುಮ್ಮನಹಳ್ಳಿಯ ಬಾಲಾಜಿ ಬಾರ್ನಲ್ಲಿ ಮದ್ಯಪಾನ ಮಾಡಿ ನಂತರ ಊಟ ಮುಗಿಸಿಕೊಂಡು ಕಾಮಾಕ್ಷಿಪಾಳ್ಯ ತೋಟದ ರಸ್ತೆಯಲ್ಲಿ ಯುವತಿ ಜೊತೆಗೆ ಮೊಬೈಲ್ ನಲ್ಲಿ ಮಾತನಾಡ್ತಾ ನಡೆದುಕೊಂಡು ಹೋಗ್ತಿದ್ದ ನಾಗೇಶ್ ಮೇಲೆ ಅಪರಿಚಿತ ಆಸಾಮಿಯೊಬ್ಬ ಹಿಂದಿನಿಂದ ಏಕಾಏಕಿ ಬಂದು ಆ್ಯಸಿಡ್ ಮುಖಕ್ಕೆ ಎರಚಿ ಪರಾರಿ ಆಗಿದ್ದಾನೆ..
ತಕ್ಷಣಕ್ಕೆ ನಾಗೇಶ್ ಮುಖ ಉರಿಯೋದಕ್ಕೆ ಶುರುವಾಗಿದೆ..ರೂಮ್ ಗೆ ಹೋಗಿ ತನ್ನ ಜೊತೆ ವಾಸವಿದ್ದ ಸ್ನೇಹಿತ ಅವಿನಾಶ್ ಎಂಬಾತನಿಗೆ ವಿಷಯ ತಿಳಿಸಿದ್ದಾನೆ..ಬಳಿಕ ಮ್ಯಾನೇಜರ್ ಪಂಕಜ್ ಗೆ ವಿಷಯ ತಿಳಿಸಿದಾಗ ಅವರು ರೂಮ್ ಬಳಿ ಬಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಪರೀಕ್ಷಿಸಿದ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಹೇಳಿದ್ದು..ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
ನಾಗೇಶ್ 2 ವರ್ಷಗಳ ಹಿಂದೆ ವೈಟ್ ಪೀಲ್ಡ್ ನಲ್ಲಿ ಕೆಲಸ ಮಾಡ್ತಿದ್ದಾಗ..ಮನೆ ಬಳಿ ವಾಸವಿದ್ದ ಯುವತಿಯೋರ್ವಳು ಪರಿಚಯವಾಗಿದ್ದಳು..ಇಬ್ಬರ ನಡುವೆ ಗೆಳೆತನ ಬೆಳೆದು ಸದಾ ಫೋನಲ್ಲಿ ಮಾತನಾಡ್ತಿದ್ರು..ಅದೇ ರೀತಿ 22 ರಂದು ಆತ ನಡೆದುಕೊಂಡು ಹೋಗ್ತಿದ್ದಾಗ.. ಯುವತಿ ಕರೆ ಮಾಡಿದ್ದು ಮಾತನಾಡಿಕೊಂಡು ಹೋಗ್ತಿದ್ದ..ಇದೇ ವೇಳೆ ಆ್ಯಸಿಡ್ ದಾಳಿ ನಡೆದಿದ್ದು..ಯುವತಿಯ ಗೆಳೆತನವೇ ಆ್ಯಸಿಡ್ ದಾಳಿಗೆ ಕಾರಣವಾಯ್ತಾ ಅನ್ನೋ ಅನುಮಾನ ಮೂಡಿದೆ..
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಕ ಚಿಕಿತ್ಸೆ ಪಡಿತಿರುವ ನಾಗೇಶ್..ನ ಎಡಕಣ್ಣು ಮತ್ತು ತುಟಿಗಳು ಊದಿಕೊಂಡಿದ್ದು ಮುಖದ ಎಡಭಾಗ ಕೂಡ ಸುಟ್ಟಂತಾಗಿದೆ.ಎಡಕೈಯಲ್ಲೂ ಸುಟ್ಟಗಾಯದ ಕಲೆಗಳಾಗಿದ್ದು..ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ..