ಬೆಂಗಳೂರು: ಪತ್ನಿಯನ್ನು ಕೊಂದ ಕೇಸ್ನಲ್ಲಿ ಜಾಮೀನು (Bail) ಪಡೆದು ಕೇರಳಕ್ಕೆ (Kerala) ಎಸ್ಕೇಪ್ ಆಗಿ 31 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು (Hebbala Police) ಕೊನೆಗೂ ಬಂಧಿಸಿದ್ದಾರೆ.
ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಹಣ ಬಂದಿಲ್ಲವೇ: ಈ ಕೂಡಲೇ ಈ ಕೆಲಸ ಮಾಡಿ ನೋಡಿ!
ಸುಬ್ರಮಣಿ ಬಂಧಿತ ಆರೋಪಿ. ಈತ 1993ರಲ್ಲಿ ಪತ್ನಿ ಸುಧಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ. ಈ ಹಿನ್ನೆಲೆ ಹೆಬ್ಬಾಳ ಪೊಲೀಸರು ಕೊಲೆ ಆರೋಪದಡಿ ಈತನನ್ನು ಬಂಧಿಸಿದ್ದರು. ಇದಾದ ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ಆರೋಪಿ ಪರಾರಿಯಾಗಿದ್ದ. ಪರಾರಿಯಾದ ಸಂದರ್ಭ ಈತ ಹಿಂದೂ ಆಗಿದ್ದು ಬಳಿಕ ಮುಸ್ಲಿಂ ಹೆಸರು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ
ಬೆಂಗಳೂರಿನಿಂದ ಎಸ್ಕೇಪ್ ಆಗಿ ಕೇರಳ ಸೇರಿದ್ದ ಆರೋಪಿ ಸುಬ್ರಮಣಿ ಅಲ್ಲಿ ಅನ್ಯಧರ್ಮದ ಆಚರಣೆ ಮತ್ತು ಪದ್ಧತಿ ಕಲಿತಿದ್ದ. ತನ್ನ ಹೆಸರನ್ನು ಹುಸೇನ್ ಸಿಕಂದರ್ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೇ ಸ್ಥಳೀಯರ ಸ್ನೇಹ ಸಂಪಾದಿಸಿ ಕೆಲಕಾಲ ಅಲ್ಲೇ ಉಳಿದು ಕೊಂಡಿದ್ದ. ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದು, ಮಸೀದಿಯಲ್ಲಿ ಮೌಲ್ವಿಯಾಗಿದ್ದ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ