ಚಿತ್ರದುರ್ಗ:- ಜಿಲ್ಲೆಯ ಹಬ್ಬಿನಹೊಳೆ ಪೊಲೀಸರು ಕಾರ್ಯಚರಣೆ ಮಾಡಿ ಶ್ರೀಗಂಧದ ಮರಗಳನ್ನು ಕಡಿದು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಡು ರಸ್ತೆಯಲ್ಲೇ ಹಸು ಬೇಟೆಯಾಡಿದ ಕರಿ ಚಿರತೆ: ಜೋಗ್ ಫಾಲ್ಸ್ ಪ್ರವಾಸಿಗರೇ ಹುಷಾರ್!
ಕೊಟ್ಟೂರಪ್ಪ, ಓಬಣ್ಣ, ಈರಣ್ಣ, ಚಳ್ಳಕೆರೆ ಮೂಲದ ಸಿದ್ದಣ್ಣ ಬಂಧಿತ ಆರೋಪಿಗಳು. ಇನ್ನೂ ಕಳ್ಳತನ ಮಾಡಿದ್ದ 60 ಕೆಜಿ ಶ್ರೀಗಂಧ ಮರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೆ.3 ರ ರಾತ್ರಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಇಕ್ಕನೂರು ಕುರುಬರ ಹಳ್ಳಿಯಲ್ಲಿ ಆರೋಪಿಗಳು, 3 ಶ್ರೀಗಂಧದ ಮರಗಳನ್ನ ಕಡಿದು ದೋಚಿಕೊಂಡು ಹೋಗಿದ್ದರು.
ಈ ಸಂಬಂಧ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.