ಅಥಣಿ : ಅವತ್ತು ಸಂಜೆಯಾಗಿತ್ತು ಊರಲ್ಲಿ ಹೋಗಿ ತನ್ನಷ್ಟಕ್ಕೆ ತಾನು ಬೈಕ್ ಮೇಲೆ ಮನೆ ಕಡೆಗೆ ಬರುವಾಗ ಹಿಂದಿನಿಂದ ಬಂದ್ ಬೊಲೆರೋ ವಾಹನ ಜೋರಾಗಿ ಗುದ್ದಿದ ರಭಸಕ್ಕೆ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ನರಳಾಡ ತೊಡಗಿದ್ದ. ಸ್ಥಳೀಯರ ಸಹಾಯದಿಂದ ಆತನನ್ನ ಆಸ್ಪತ್ರೆಗೆ ಸೇರಿಸಲಾಯಿತು ಆದ್ರೆ ವಿಧಿಯಾಟಕ್ಕೆ ಆಸ್ಪತ್ರೆ ಬಾಗಿಲಲ್ಲೇ ಕೊನೆಯುಸಿಳೆದ ವ್ಯಕ್ತಿಯ ಸಾವಿನ ರಹಸ್ಯ ಗೊತ್ತಾದ್ರೆ ನೀವು ಕೂಡ ಬೆಚ್ಚಿ ಬೀಳ್ತಿರಾ..
ಹೌದು,, ಅದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಅನ್ನೋ ಗ್ರಾಮ. ಈ ಗ್ರಾಮದಲ್ಲಿ ಭೂಮಿ ವಿಚಾರವಾಗಿ ಕೂಡಿಕೊಂಡ ವೈಮನಸ್ಸು ಕೊಲೆಯಲ್ಲಿ ಅಂತ್ಯವಾಗಿದೆ.
ಹಂತಕರು ಪೊಲೀಸ್ ರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಪಘಾತವೆಂದು ಬಿಂಬಿಸಿ ಕೊಲೆ ಮಾಡಲಾಗಿದೆ.
ಆದ್ರೆ ಖಿಲಾಡಿ ಪೊಲೀಸರು ಕೇವಲ 24 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.
ಘಟನಾ ವಿವರ
ಮೃತ ಮಾಣಿಕ ಕೇಶವ ಕದಮ( ) ವ್ಯಕ್ತಿಯ ಆರು ಎಕರೆ ಜಮೀನನ್ನ ಕೊಲೆ ಆರೋಪಿತರಾದ ಭರಮಣ್ಣ ಸೊಡ್ಡಿ ಎಂಬುವವರಿಗೆ ಮಾರಲಾಗಿತ್ತು ಆದ್ರೆ ದುಡ್ಡಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿತ್ತು. ಸುಮಾರು ವರ್ಷಗಳಿಂದ ಕೋರ್ಟ್ ನಲ್ಲಿದ್ದ ಭೂಮಿ ವಿವಾದಕ್ಕೆ ಇನ್ನೇನು ಕೊನೆಘಳಿಗೆ ಬಂದಿತ್ತು ಅನ್ನೋ ಮಾತುಗಳಿಂದ ನಮ್ಮ ಭೂಮಿ ಕೈಬಿಡುತ್ತೆ ಎಂಬ ಸಂಶಯದಿಂದ ಮೃತ ಮಣಿಕನನ್ನ ಕೊಲೆ ಮಾಡಲು ಪ್ಲ್ಯಾನ್ ಒಂದನ್ನ ಹಾಕಿ ತನ್ನ ಅಳಿಯಂದಿರು ಹಾಗೂ ಮೂವರು ಅಣ್ಣ-ತಮ್ಮಂದಿರು ಸೇರಿ ಸಂಚು ರೂಪಿಸಿ ತಮ್ಮ ಹೊಸ ಬುಲೆರೋ ಪಿಕಪ್ ವಾಹಣದಿಂದ ಅಪಘಾತ ಮಾಡಿಸಿ ಕೊಲೆ ಮಾಡಿಸಲಾಗಿದೆ ಎಂದು ಕುಟುಂಬಸ್ಥರು ದುರಿನಲ್ಲಿ ಉಲ್ಲೇಖಸಿದ್ದಾರೆ
ಜಾಡು ಹಿಡಿದ ಪೊಲೀಸ್ ರು ಕೊಲೆ ಶಂಕಿತ ಆರೋಪಿಗಳಾಗಿ. ಭರಮಣ್ಣ, ರಾಮ, ಲಕ್ಷ್ಮಣ, ಅನಿಲ, ಶುಭಾಶ,ಐದು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು. ಆರೋಪಿಗಳನ್ನ ಬಂಧಿಸಿದ್ದಾರೆ.
ಏನೆ ಆಗಲಿ ಭೂಮಿ ವಿಚಾರವಾಗಿ ಮೆಟ್ಟಿಲೇರಿದ ಮಾಣಿಕನನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಗ್ರಾಮದಲ್ಲಿ ಪ್ರಭಾವಿಗಳು ಎಂದೆನಿಸಿಕೊಂಡವರೇ ಕೊಲೆ ಮಾಡಿದ್ದಾರೆ ಅಂದ್ರೆ ಬಡ ಜನರು ಬದುಕೋದು ಹೇಗೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ