ಬೆಂಗಳೂರು: ಕ್ಯಾಂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಆನೇಕಲ್ನ ಬನ್ನೇರುಘಟ್ಟ- ಜಿಗಣಿ ಮುಖ್ಯರಸ್ತೆಯ ಹರಪನಹಳ್ಳಿ ತಿರುವಿನಲ್ಲಿ ನಡೆದಿದೆ. ಅಪಘಾತದಲ್ಲಿ ಟಿಕ್ಕಿ ದಾರುಣವಾಗಿ ಮೃತಪಟ್ಟಿದ್ದಾರೆ. ನರೇಶ್(33) ಅಪಘಾತದಲ್ಲಿ ಮೃತಪಟ್ಟವರು. ಮೂಲತಃ ಆಂಧ್ರ ಮೂಲದ ಚಿತ್ತೂರಿನ ನರೇಶ್ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿಗಣಿಗೆ ಬಂದು ವಾಸವಾಗಿದ್ದರು.
Health Tips: ಕೆಂಪು ಸೇಬಿಗಿಂತ ಹಸಿರು ಸೇಬು ಹೆಚ್ಚು ಆರೋಗ್ಯಕರವಂತೆ! ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?
ಐಟಿ ಕಂಪನಿಯಲ್ಲಿ ಸಾಫ್ಟ್ವೇರ್ ಉದ್ಯೋಗಿ ಆಗಿದ್ದ ನರೇಶ್ ನಿನ್ನೆ ಚಿಕ್ಕಪ್ಪನ ಮನೆಗೆ ಹೋಗಿ ಬೆಳಗ್ಗೆ ಜಿಗಣಿಗೆ ವಾಪಸ್ ಆಗುತ್ತಿದ್ದರು. ಹರಪನಹಳ್ಳಿ ಬಳಿ ಏಕಾಏಕಿ ಚಾಲಕ ತಿರುವು ಪಡೆದುಕೊಂಡಿದ್ದರಿಂದ ಕ್ಯಾಂಟರ್ ಮುಂಬದಿಗೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.