ಬಳ್ಳಾರಿ:- ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಜೆಸ್ಕಾಂ ಕಚೇರಿ ಪಕ್ಕದಲ್ಲಿ ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದಿದ್ದಾನೆ ಎಂದು ಪ್ರಶ್ನೆ ಮಾಡಲು ಹೋಗಿದ್ದ ಯುವಕನನ್ನು ಹಳೆ ದ್ವೇಷ ಮತ್ತು ಮೃತನ ಕುಟುಂಬದ ಮೇಲಿದ್ದ ಅಸೂಹೆಯಿಂದ ಆರು ಜನ ಸೇರಿ ಚಾಕು ಮತ್ತು ರಾಡ್ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಜರುಗಿದೆ.
ಬಂಗಾರಿ ಮಂಜುನಾಥ್ ಮೃತ ರ್ದುದೈವಿ ಎನ್ನಲಾಗಿದೆ. ತನ್ನ ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದರೂ ಎಂದು ನೆರೆ ಮನೆಯ ದಾಯಾದಿಗಳನ್ನ ಪ್ರಶ್ನೆ ಮಾಡಲು ಹೋಗಿದ್ದಾನೆ. ಏಕಾಏಕಿ ಮಾತಿಗೆ ಮಾತು ಬೆಳೆದು ಎದರುಗಡೆಯ ದಾಯಾದಿಗಳು ಕೈಯಲ್ಲಿ ಚಾಕು, ರಾಡ್ ಹಿಡಿದು ಭೀಕರವಾಗಿ ಕೊಂದೆ ಬಿಟ್ಟಿದ್ದಾರೆ.
ಬಂಗಾರಿ ಮಂಜುನಾಥ್ ಹಾಗೂ ಅವರ ದಾಯಾದಿ ಬಂಗಾರಿ ಹನುಮಂತ ಕುಟುಂಬಕ್ಕೆ ಈ ಹಿಂದೆ ದ್ವೇಷ ಇತ್ತು. ಆಸ್ತಿ ವಿಚಾರವಾಗಿ, ಮನೆ ಜಾಗದ ವಿಚಾರವಾಗಿ, ಹಣದ ವಿಚಾರವಾಗಿ ಪದೇ ಪದೇ ಎರಡು ಕುಟುಂಬಗಳ ನಡುವೆ ಜಗಳವಾಗುತ್ತಲೇ ಇತ್ತು. ಕೊಲೆಯಾದ ಬಂಗಾರಿ ಮಂಜುನಾಥ ಕೂಡ ಕಟ್ಟುಮಸ್ತಾಗಿದ್ದ ಹೀಗಾಗಿ ಇತನು ಯಾವ ಬೇದರಿಕೆಗೂ ಜಗ್ಗದೆ ಅವರೊಂದಿಗೆ ಕಾದಾಟಕ್ಕೆ ನಿಲ್ಲುತ್ತಿದ್ದ. ಇದನ್ನ ಸಹಿಸಿಕೊಳ್ಳದ ಬಂಗಾರಿ ಹನುಮಂತ ಕುಟುಂಬ ಸಮಯಕ್ಕೆ ಕಾದು, ಇತನನ್ನ ಕೊಲ್ಲಬೇಕು ಎಂದು ಹೊಂಚು ಹಾಕತ್ತಲೇ ಇದ್ದರು.
ನಿನ್ನೆ ತಡ ರಾತ್ರಿ 2:30 ರ ಸುಮಾರು ಹೆಂಡತಿಗೆ ಬೈದಿದ್ದನ್ನ ಪ್ರಶ್ನೆ ಮಾಡಲು ಬಂದಿದ್ದ ಬಂಗಾರಿ ಮಂಜುನಾಥನನ್ನ ಇದೇ ಸರಿಯಾದ ಸಮಯ ಎಂದು ಚಾಕುವಿನಿಂದ ಎದೆಗೆ, ಹೊಟ್ಟೆ ಭಾಗಕ್ಕೆ, ಮರ್ಮಾಂಗಕ್ಕೆ ಚುಚ್ಚಿ, ರಾಡ್ನಿಂದ ಭೀಕರವಾಗಿ ಹೊಡೆದು ಕೊಂದೆ ಬಿಟ್ಟಿದ್ದಾರೆ. ಇಂತಹ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತನ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ