ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಗಲೇ ತಾನು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಪ್ರಕಟ ಮಾಡಿದೆ. ಈ ಬಗ್ಗೆ ತಮ್ಮ ಯೂ ಟ್ಯೂಬ್ ಕಾರ್ಯಕ್ರಮದಲ್ಲಿ ಮಾತನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಸಿಬಿ ತಂಡದ ಮಾಜಿ ಸ್ಟಾರ್ ಬ್ಯಾಟರ್ ಎಬಿ ಡಿ ವಿಲಿಯರ್ಸ್ ಅಸಮಾಧಾನ ಹೊರಹಾಕಿದ್ದಾರೆ.
ಕೋಚಿಂಗ್ ಬಳಗ ಬದಲಾಯಿಸಿಕೊಂಡು ಟೀಮ್ ಮ್ಯಾನೇಜ್ಮೆಂಟ್ನಲ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಚತುರ ತಂತ್ರಗಾರರಲ್ಲಿ ಒಬ್ಬರಾದ ಮೋ ಬೋಬಟ್ ಅವರನ್ನು ಆರ್ಸಿಬಿ ಕ್ರಿಕೆಟ್ ಡೈರೆಕ್ಟರ್ ಆಗಿ ನೇಮಕ ಮಾಡಿದೆ. ಈ ನಿಟ್ಟಿನಲ್ಲಿ ಚಾಲೆಂಜರ್ಸ್ ಮುಂದಿನ ಆವೃತ್ತಿಗೆ ವಿಭಿನ್ನ ಯೋಜನೆಗಳನ್ನು ಹಾಕಿಕೊಂಡಂತ್ತಿದೆ. ಆದರೆ, ಜಾಶ್ ಹೇಝಲ್ವುಡ್ ಅವರಂತಹ ಮ್ಯಾಚ್ ವಿನ್ನಿಂಗ್ ಫಾಸ್ಟ್ ಬೌಲರ್ನ ಕೈಬಿಟ್ಟು ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರನ್ನು ಉಳಿಸಿಕೊಂಡಿರುವ ಹಿಂದಿನ ಆಲೋಚನೆ ಅಚ್ಚರಿ ತಂದಿದೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
“ದಿನೇಶ್ ಕಾರ್ತಿಕ್ ಅವರನ್ನು ಉಳಿಸಿಕೊಂಡಿರುವುದು ನನಗೆ ದೊಡ್ಡ ಅಚ್ಚರಿ ತಂದಿದೆ. ಕಳೆದ ಆವೃತ್ತಿಯಲ್ಲಿ ಅವರ ಬ್ಯಾಟ್ನಿಂದ ರನ್ ಬಂದೇ ಇಲ್ಲ. ನನ್ನ ಪ್ರಕಾರ ಅವರಿನ್ನೂ 2 ಆವೃತ್ತಿಗಳಲ್ಲಿ ಆಡಬಹುದು. ಆತ ಅದ್ಭುತ ಕ್ರಿಕೆಟಿಗ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಆರ್ಸಿಬಿ ಮುಂದಿನ ಆವೃತ್ತಿಗೆ ಯುವ ವಿಕೆಟ್ಕೀಪರ್ ಕಡೆಗೆ ಗಮನ ನೀಡಿ ದಿನೇಶ್ ಕಾರ್ತಿಕ್ ಅವರನ್ನು ಕೈಬಿಟ್ಟು ಪರ್ಸ್ ಮೊತ್ತ ಹೆಚ್ಚಿಸಿಕೊಳ್ಳಲಿದೆ ಎಂದು ಅಂದುಕೊಂಡಿದ್ದೆ. ಏಕೆಂದರೆ ಹರಾಜಿನಲ್ಲಿ ಹಲವು ಪ್ರತಿಭಾನ್ವಿತ ಯುವ ಕೀಪರ್ಗಳನ್ನು ಕಾಣಬಹುದು,” ಎಂದಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)