ಬೆಂಗಳೂರು:-ನನ್ನ ಭೇಟಿಗೆ ಜೈಲಿನ ಬಳಿ ಯಾರು ಬರಬೇಡಿ, ಜೈಲಿನ ನಿಯಮಗಳ ಪ್ರಕಾರ ನನ್ನ ಭೇಟಿ ಅಸಾಧ್ಯ. ಜೈಲಿನ ಬಳಿ ಬಂದು ಕಾಯುವುದು ನಿರಾಸೆಯಿಂದ ವಾಪಸ್ ಆಗುವುದು ಬೇಡ ಎಂದು ನಟ ದರ್ಶನ್ ಮನವಿ ನಡುವೆಯೂ ಯುವತಿಯೋರ್ವಳು ಭೇಟಿಗೆ ಆಗಮಿಸಿ ವಾಪಾಸ್ ಆಗಿದ್ದಾಳೆ. ಇದರ ನಡುವೆ ನಟ ದರ್ಶನ್ ದಿನಚರಿ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ..
7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಈ ದಿನದಂದು ಏರಿಕೆಯಾಗಲಿದೆ ವೇತನ ಪ್ರಮಾಣ!?
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ ಎಂಟ್ರಿ ಕೊಟ್ಟು ಏಳನೇ ದಿನಕ್ಕೆ ಕಾಲಿಟ್ಟಿದೆ. ಜೈಲೂಟ ಸೇರುತ್ತಿಲ್ಲ ಬಿಟ್ರೆ ಗತಿಯಿಲ್ಲ ಎನ್ನುವ ಸ್ಥಿತಿಯಲ್ಲಿರುವ ಡಿ-ಗ್ಯಾಂಗ್ ರಾತ್ರಿ ನಿದ್ರೆಯೂ ಸಹ ಸರಿಯಾಗಿ ಮಾಡುತ್ತಿಲ್ಲ. ಇದರ ನಡುವೆ ಜೈಲಿನ ಬಳಿ ಅಭಿಮಾನಿಗಳು ಅದರಲ್ಲೂ ವಿಶೇಷಚೇತನ ಅಭಿಮಾನಿ ಸೌಮ್ಯ ಆಗಮಿಸಿ ಭೇಟಿ ಮಾಡಲಾಗದೆ ಕಾದು ವಾಪಸ್ ಆಗಿರುವ ವಿಚಾರ ತಿಳಿದು ನಟ ದರ್ಶನ್ ಬೇಸರಗೊಂಡಿದ್ದಾರೆ. ಹಾಗಾಗಿ ಜೈಲಿನ ಬಳಿ ಅಭಿಮಾನಿಗಳು ಯಾರು ಆಗಮಿಸಬಾರದು ಎಂದು ನಟ ದರ್ಶನ್ ಜೈಲಾಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ದರ್ಶನ್ ಮನವಿ ನಡುವೆಯೂ ಜೈಲಿನ ಬಳಿ ಕ್ರೆಟಾ ಕಾರಿನಲ್ಲಿ ಮಾಸ್ಕ್ ಧರಿಸಿ ಬಂದಿದ್ದ ಯುವತಿ ತಾನು ದರ್ಶನ್ ಸಂಬಂಧಿ ಎಂದು ಭೇಟಿಗೆ ವಿಫಲ ಯತ್ನ ನಡೆಸಿ ಮಾಧ್ಯಮಗಳ ಕ್ಯಾಮಾರಾ ಕಾಣುತ್ತಿದ್ದಂತೆ ವಾಪಸ್ ಆಗಿದ್ದಾರೆ.
ಇನ್ನೂ ಡಿ-ಗ್ಯಾಂಗ್ನ ಪವಿತ್ರಾಗೌಡ ಒಂಟಿತನದಿಂದ ಹೊರಬರಲು ಪುಸ್ತಕಗಳ ಮೊರೆ ಹೋಗಿದ್ದಾಳೆ. ಪವಿತ್ರಾ ಮನವಿಯಂತೆ ಜೈಲಿನ ಲೈಬ್ರರಿಯಲ್ಲಿ ಫ್ಯಾಷನ್ ಡಿಸೈನಿಂಗ್,ತ್ರಿಲರ್ ಮತ್ತು ಹಾರರ್ ಬಗೆಗಿನ ಪುಸ್ತಕಗಳನ್ನು ಜೈಲಿನ ಸಿಬ್ಬಂದಿ ಒದಗಿಸಿದ್ದಾರೆ. ಮಗಳು ಮತ್ತು ಪೋಷಕರ ಭೇಟಿಯಿಂದ ಲವಲವಿಕೆಯಿಂದ ಇರುವಂತಹ ಪವಿತ್ರಾ ಜೈಲೂಟವನ್ನ ಕಷ್ಟಪಟ್ಟು ಸೇವಿಸುತ್ತಿದ್ದು, ನಿದ್ರೆ ಕೂಡ ಅಷ್ಟಕಷ್ಟೇ ಎನ್ನುವಂತಾಗಿದೆ. ಹೈಫೈ ಲೈಫ್ ಲೀಡ್ ಮಾಡಿದ್ದ ಪವಿತ್ರಾಗೆ ಸಹಬಂಧಿಗಳ ಒಡನಾಟ ಕೂಡ ಅಪತ್ಯವಾಗಿದ್ದು, ಇದೀಗ ಪುಸ್ತಕಗಳ ಮೊರೆ ಹೋಗಿದ್ದಾಳೆ ಎನ್ನಲಾಗಿದೆ.
ಒಟ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುವಾಸ ಅನುಭವಿಸಲಾಗದೆ ಪ್ರತಿಕ್ಷಣವೂ ಧುಗುಡದಲ್ಲಿ ದಿನ ದೂಡುತ್ತಿದ್ದು, ಪವಿತ್ರಾಗೌಡ ಮಾತ್ರ ಪುಸ್ತಕಗಳ ಮೊರೆ ಹೋದ್ರೆ ನಟ ದರ್ಶನ್ ಮಾತ್ರ ಇನ್ನೂ ಸಹಬಂಧಿಗಳ ಜೊತೆ ಸೇರದೆ ಮೌನಕ್ಕೆ ಶರಣಾಗಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)