ಬೆಂಗಳೂರು ನಗರ ಇಂದು ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ.ಮಧ್ಯರಾತ್ರಿ ಬೈಕ್ ನಲ್ಲಿ ಡ್ರಾಪ್ ಕೇಳಿದ ಯುವತಿಗೆ ಕಾಮುಕ ನರಕ ತೋರಿಸಿದ್ದಾನೆ..ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ..ಇಷ್ಟಕ್ಕೂ ಆ ಯುವತಿ ಮಾಡಿದ ಅದೊಂದು ಯಡವಟ್ಟೇನು..?! ಅನ್ನೋ ಡಿಟೇಲ್ ರಿಪೋರ್ಟ್ ತೋರಿಸ್ತೀವಿ ನೋಡಿ.. ಬೆಂಗಳೂರು ನಗರ ಎಷ್ಟು ಕಲರ್ ಫುಲ್ ಆಗಿದ್ಯೋ ಅಷ್ಟೇ ಕರಾಳತೆಯಿಂದ ಕೂಡಿದೆ.ನಗರದಲ್ಲಿ ಯುವತಿಯರು ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಬಂದುಬಿಡುತ್ತೆ..ಇಲ್ಲಾಗಿರೋದು ಕೂಡ ಅದೇ ಒಂಟಿ ಯುವತಿಯನ್ನ ಕರೆದೊಯ್ದ ಕಾಮ ಪಿಶಾಚಿ ಮೃಗನಂತೆ ಎರಗಿ ನರಕ ತೋರಿಸಿದ್ದಾನೆ.
ಹೌದು..ಅದು ಆಗಸ್ಟ್ 17 ರ ಮಧ್ಯರಾತ್ರಿ..ಹರ್ಷವರ್ಧನ್ ಎಂಬಾತನಿಗೆ ಸ್ನೇಹಿತೆಯೋರ್ವಳು ಕರೆ ಮಾಡಿದ್ದು…ಆಕೆಯ ಸ್ನೇಹಿತೆಯಿಂದ ಎಮರ್ಜೆನ್ಸಿ ಮೆಸೆಜ್ ಮತ್ತು ಲೋಕೇಷನ್ ಬಂದಿದ್ದು, ಪೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದ್ದಾಳೆ ಹಾಗಾಗಿ ಆಕೆಯಿಂದ ಬಂದಿದ್ದ ಲೋಕೇಷನ್ ಸ್ಥಳವಾದ ಹೊಸೂರು ಸರ್ವೀಸ್ ರಸ್ತೆಯಲ್ಲಿರುವ ಗಿರಿಯಾಸ್ ಶೋರೂಮ್ ಹಿಂಭಾಗದ ಲಾರಿಗಳನ್ನು ನಿಲ್ಲಿಸುವ ಖಾಲಿ ಜಾಗಕ್ಕೆ ಬಂದು ನೋಡಿದ್ದು ಯುವತಿ ಬೆತ್ತಲೆಯಾಗಿ ಲಾರಿಯ ಹಿಂಭಾಗದಲ್ಲಿ ಬಿದ್ದಿದ್ದು,ಆಕೆಯ ಮೇಲೆ ಒಂದು ರೆಡ್ ಜಾಕೆಟ್ ಇದ್ದಿದ್ದು ಕಂಡಿದೆ.
Clutch: ಗಮನಿಸಿ.. ಕಾರಿನ ಕ್ಲಚ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!
.ಹರ್ಷವರ್ಧನ್ ತಮ್ಮ ಬಟ್ಟೆಯಿಂದ ಮೈ ಮುಚ್ಚಲು ಯತ್ನಿಸಿದ್ದಾನೆ ..ಅಷ್ಟರಲ್ಲಿ ಮತ್ತೋರ್ವ ಸ್ನೇಹಿತ ಕೂಡ ಕಾರ್ ನಲ್ಲಿ ಯುವತಿಯ ಮೊಬೈಲ್ ನಿಂದ ಹೋಗಿದ್ದ ಮೆಸೆಜ್ ಆಧಾರದ ಮೇಲೆ ಸ್ಥಳಕ್ಕೆ ಬಂದಿದ್ದ, ಇಬ್ಬರು ಸೇರಿ ಕಾರ್ ಶೀಟ್ ಕವರ್ ನಿಂದ ಆಕೆಯ ದೇಹವನ್ನು ಮುಚ್ಚಿ ಕಾರ್ ನಲ್ಲಿ. ಮಲಗಿಸಿದ್ದಾರೆ..ಅಷ್ಟರಲ್ಲಿ, ಸ್ಥಳದಲ್ಲಿ ಒಬ್ಬ ಅಪರಿಚಿತ ಆಸಾಮಿಯು ಕೇವಲ ಪ್ಯಾಂಟ್ ನಲ್ಲಿ.. ನಿಂತಿದ್ದು, ಆತನು ಗಾಬರಿಯಲಿದ್ದ ಆತನ ಮುಖಕ್ಕೆ ಪರಚಿದ ಗಾಯಗಳು ಕೂಡ ಆಗಿತ್ತು…ಹರ್ಷವರ್ಧನ್ ಆತನಿಗೆ ಹಿಡಿದುಕೊಳ್ಳಲು ಹೋದಾಗ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ..
ಕೂಡಲೇ ಇಬ್ಬರು ಆಸ್ವಸ್ಥಗೊಂಡಿದ್ದ ಯುವತಿಯನ್ನ ಕಾರ್ ನಲ್ಲಿ ಕರೆದುಕೊಂಡು ಹೋಗಿದ್ದು..ಚಿಕಿತ್ಸೆಗಾಗಿ ಬೊಮ್ಮಸಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ..ಕಾರ್ ನಲ್ಲಿ ಯುವತಿಯನ್ನ ವಿಚಾರಸಿದಾಗ ಅಪರಿಚಿತ ಆಸಾಮಿಯು ಅತ್ಯಾಚಾರ ಮಾಡಲು ಯತ್ನಿಸಿರೋದಾಗಿ ಹೇಳಿದ್ದಾಳೆ.. ಆಗಿದ್ದೇನಂದ್ರೆ ಯುವತಿ ಕೋರಮಂಗಲಕ್ಕೆ ಸ್ನೇಹಿತನ ಜೊತೆಗೆ ಪಾರ್ಟಿಗೆ ಆಗಮಿಸಿದ್ಲು.ರಾತ್ರಿ ಹನ್ನೊಂದುವರೇ ತನಕ ಪಾರ್ಟಿ ಮಾಡಿದ ಇಬ್ಬರು, ಪಬ್ ನಿಂದ ಹೊರಗೆ ಬಂದಿದ್ದಾರೆ.. ಈ ವೇಳೆ ಯುವತಿ- ಯುವಕ ಹೋಗುತ್ತಿದ್ದ ಬೈಕ್ ಗೆ ಆಟೋವೊಂದು ಟಚ್ ಆಗಿತ್ತು.. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.. ಅದಾಗದಲೇ ಕುಡಿದ ನಶೆಯಲ್ಲಿದ್ದ ಯುವತಿ,
ಅದೇ ರಸ್ತೆಯಲ್ಲಿ ಬರ್ತಿದ್ದ ಬೈಕ್ ಸವಾರನಿಗೆ ಮನೆಗೆ ಹೋಗಲು ಡ್ರಾಪ್ ಕೇಳಿದ್ದಾಳೆ.. ಬೈಕ್ ನಲ್ಲಿ ಸ್ವಲ್ಪ ದೂರದ ಬಳಿಕ ಬೈಕ್ ನಿಂದ ಇಳಿದು ಮತ್ತೊಂದು ಬೈಕ್ ನಲ್ಲಿ ಡ್ರಾಪ್ ಪಡೆದಿದ್ದಾಳೆ .ಯುವತಿ ಮದ್ಯದ ನಶೆಯಲ್ಲಿ ಇದ್ದಿದ್ದನ್ನೇ ಬಂಡವಾಳ ಮಾಡಿಕೊಂಡ ಅಪರಿಚಿತ ಆಸಾಮಿ ಬೊಮ್ಮನಹಳ್ಳಿ ಸಮೀಪದ ನಿರ್ಜನವಾದ ಲಾರಿ ನಿಲ್ಲಿಸುವ ಜಾಗಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ..ಈ ವೇಳೆ ಆಕೆ ಪ್ರತಿರೋಧ ಒಡ್ಡಿದ್ದು..ಮೊಬೈಲ್ ನಲ್ಲಿ ಎಮರ್ಜೆನ್ಸಿ SOS ಬಟನ್ ಒತ್ತಿದ್ದಾಳೆ..ತಕ್ಷಣ ಮಾಹಿತಿ ಸ್ನೇಹಿತರಿಗೆ ಹೋಗಿದ್ದು.
.ದೊಡ್ಡ ಅಪಾಯದಿಂದ ಪಾರಾಗಿದ್ದಾಳೆ..21 ವರ್ಷದ ಸಂತ್ರಸ್ಥ ಯುವತಿ ಕೊನೆಯ ವರ್ಷದ ಪದವಿ ಓದ್ತಿದ್ದಾಳೆ…ಘಟನೆ ಬಗ್ಗೆ ಬಿಎನ್ಎಸ್ ಕಾಯ್ದೆ 64 ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.. ಅದೇನೇ ಆದ್ರೂ ಅಪರಿಚಿತರೊಂದಿಗೆ ಪಾರ್ಟಿ, ಜಾಲಿರೈಡ್, ಪಿಕಪ್ ಡ್ರಾಪ್ ಅಂತಾ ಹೋಗೋಕು ಮುನ್ನ ಯುವಕ ಯುವತಿಯರು ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ಅಪಾಯಗಳು ಕಟ್ಟಿಟ್ಟ ಬುತ್ತಿ.