ವಿಜಯಪುರ: ಟವರ್ ಏರಿ ಯುವಕನ ಹುಚ್ಚಾಟ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ನಡೆದಿದೆ. ಜಿಯೋ ಟವರ್ ಏರಿದ ಆಸಾಮಿ ಹುಚ್ಚಾಟ ಮೆರೆದಿದ್ದಾನೆ. ಯುವಕ ಟವರ್ನ ತುದಿ ಏರಿ ನಿಂತಿದ್ದಾನೆ. ಆತನ ಹುಚ್ಚಾಟ ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಯುವಕನ ಹೆಸರು ಮಾಹಿತಿ ತಿಳಿದು ಬಂದಿಲ್ಲ.
ಕಳೆದ 6 ತಿಂಗಳ ಹಿಂದೆ ಸಿಂದಗಿ ತಾಲೂಕಿನಲ್ಲಿ ಎರಡು ಬಾರಿ ಟವರ್ ಹತ್ತಿ ಹುಚ್ಚಾಟ ಮಾಡಿದ್ದ ಕುಡುಕ. ಆತನೇ ಮತ್ತೆ ಟವರ್ ಏರಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಯುವಕನನ್ನ ಕೆಳಗೆ ಇಳಿಸೋಕೆ ಹರಸಾಹಸ ಪಡುತ್ತಿದ್ದಾರೆ.