ಚಿಕ್ಕೋಡಿ:- ಕೃಷ್ಣಾ ನದಿಯ ಹಿನೀರಿಗೆ ಭಾಗಿನ ತೋರಿಸಲು ಹೋದ ಯುವಕ ಈಜಲು ಬರದೆ ಸಾವನ್ನಪ್ಪಿದ್ದಾನೆ.
Nelamangala: ಚಾಲಕನ ನಿರ್ಲಕ್ಷ್ಯ; ಬಸ್ ನಿಂದ ಕೆಳಗೆ ಬಿದ್ದು ಮಹಿಳೆ ಸಾವು!
ಇಂಗಳಿ ಗ್ರಾಮದ ಯುವಕ ರೋಹಣ ಪಾಟೀಲ (28) ಮೃತ ಯುವಕ ಎನ್ನಲಾಗಿದೆ. ಮೂರು ತಿಂಗಳ ಹಿಂದಷ್ಟೆ ಮೃತ ಯುವಕ ಮದುವೆಯಾಗಿದ್ದ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಏರಿಕೆ ಹಿನ್ನಲೆ ಹಿನ್ನಿರಿನ ಒತ್ತಡ ಹೆಚ್ಚಾಗಿದೆ. ಇದೇ ವೇಳೆ ಅವಘಡ ಸಂಭವಿಸಿದೆ
ಘಟನೆಯಿಂದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಅಂಕಲಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.