ಬೆಂಗಳೂರು:- ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಠಾಣೆಯಲ್ಲಿ UDR ದಾಖಲಾಗಿದೆ.
ನ್ಯಾಷನಲ್ ಲಾ ಕಾಲೇಜ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿಯಿಂದ ದೂರು ದಾಖಲಾಗಿದೆ. ಹಾಸ್ಟೆಲ್ ನಿಂದ ಕ್ಲಾಸ್ ಮೇಟ್ ಗೆ ಹೇಳಿ ಧ್ರುವ ಹೊರಗೆ ಬಂದಿದ್ದಾರೆ. ಹಾಸ್ಟೆಲ್ ನಿಂದ ಹೊರಟ ಬಳಿಕ ಮುಕ್ಕಾಲು ಘಂಟೆಗೆ ಘಟನೆ ಜರುಗಿದೆ.
ಇದೇ ತಿಂಗಳ ಮಾರ್ಚ್ 10 ರಂದು ಮುಂಬೈನಿಂದ ಧ್ರುವ ವಾಪಸ್ ಆಗಿದ್ದು, ಇದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೂ ವಿದ್ಯಾರ್ಥಿ ಸ್ವಂತಃಹ ಮೆಟ್ರೋ ಹಳಿಗೆ ಬಂದು ತಲೆ ಕೊಡೋ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮೆಟ್ರೋ ಬರೋ ಸಮಯದಲ್ಲಿ ಹಳಿಗೆ ವಿದ್ಯಾರ್ಥಿ ಬಿದ್ದಿದ್ದಾನೆ.
ರುಂಡಮುಂಡ ಬೇರ್ಪಟ್ಟು ಕ್ಷಣ ಮಾತ್ರದಲ್ಲಿ ವಿದ್ಯಾರ್ಥಿ ದೇಹ ಛಿದ್ರ ಛಿದ್ರವಾಗಿದೆ.