ಮಂಡ್ಯ: ಕಾಡು ಹಂದಿ ಏಕಾಏಕಿ ರೋಡಿಗೆ ಓಡಿ ಬಂದ ಪರಿಣಾಮ ಕಾಡು ಹಂದಿಗೆ ಗುದ್ದಿದ ಪರಿಣಾಂ ಬೈಕ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿ, ಗಂಡ ಹಾಗೂ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ನಂದಿಪುರ ಗ್ರಾಮದಲ್ಲಿ ನಡೆದಿದೆ. ಭವ್ಯ (26) ಮೃತ ದುರ್ಧೈವಿಯಾಗಿದ್ದು,
Tamarind Seed Benefits: ಹುಣಸೆ ಬೀಜದ ಆರೋಗ್ಯಕಾರಿ ಪ್ರಯೋಜನಗಳು ಒಂದೇ ಎರಡೇ..? ಇಲ್ಲಿದೆ ನೋಡಿ
ಸಂಬಂಧಿಕರ ಮನೆಯಿಂದ ತಮ್ಮ ಸ್ವಗ್ರಾಮ ನಂದೀಪುರಕ್ಕೆ ಹೋಗುವ ವೇಳೆ ಬೈಕ್ ಗೆ ಕಾಡು ಹಂದಿ ಅಡ್ಡ ಬಂದು ಬೈಕ್ ನಲ್ಲಿದ್ದ ಮೂವರು ಕೆಳಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆ ಭವ್ಯಗೆ ತಲೆ ಪೆಟ್ಟಾದ ಹಿನ್ನಲೆ ಸಾವನ್ನಪ್ಪಿದ್ದಾರೆ. ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಶವ ರವಾನೆ ಮಾಡಲಾಗುತ್ತದೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.