ಗದಗ:- ರಸ್ತೆ ಬಿಟ್ಟು ಜಮೀನಿಗೆ ಸಾರಿಗೆ ಸಂಸ್ಥೆ ಬಸ್ ನುಗ್ಗಿದ್ದು, ಭಾರಿ ಅನಾಹುತ ತಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ ಬಳಿ ಜರುಗಿದೆ.
ಬಿಳಿಗಿರಿರಂಗನಬೆಟ್ಟದಲ್ಲಿ ಒಂಟಿ ಸಲಗನ ಆರ್ಭಟದಿಂದ ನಲುಗಿದ ಗಿರಿಜನರು.. !
ಮುಂಡರಗಿಯಿಂದ ಹಮ್ಮಿಗಿ ಗ್ರಾಮಕ್ಕೆ ಬಸ್ ತೆರಳ್ತಿತ್ತು. ಚಾಲಕನಿಗೆ ತಲೆ ಸುತ್ತು ಬಂದ ಪರಿಣಾಮ ಘಟನೆ ಎನ್ನಲಾಗ್ತಿದೆ. ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದ್ದು, ಸಾರಿಗೆ ಸಂಸ್ಥೆ ಸಿಬ್ಬಂದಿ ಸೇರಿದಂತೆ ಎಲ್ಲರೂ ಸೇಫ್ ಆಗಿದ್ದಾರೆ. ಬಸ್ ಡಕೋಟಾ ಆಗಿದ್ರಿಂದ ಬಸ್ ಜಮೀನಿಗೆ ನುಗ್ಗಿದೆ.
ಡಕೋಟಾ ಬಸ್ ಮರೆಮಾಚಲು ಹೀಗೆ ಹೆಳ್ತಿದ್ದಾರೆ ಅಂತಾರೆ ಪ್ರಯಾಣಿಕರು. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.