ದಾವಣಗೆರೆ: ಎಂ ಪಿ ರೇಣುಕಾಚಾರ್ಯ ಬೆಂಬಲಿಗ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಗಳೂರು ಕ್ಷೇತ್ರದ ಕಾರ್ಯಕರ್ತ ಉಮೇಶ್ ಬಳ್ಳಾರಿ ಮೈ ಮೇಲೆ ಡಿಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳಲು ಯತ್ನಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ,
ಪತ್ನಿ ಗಾಯತ್ರಿ ಹೆಸರು ಪ್ರಕಟಿಸಿರುವುದನ್ನು ಖಂಡಿಸಿ ಶಿರಮಗೊಂಡನ ಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಅವರ ನಿವಾಸದಲ್ಲಿ ಸಿದ್ದೇಶ್ವರ ವಿರೋಧಿ ಬಣ ಸಭೆ ನಡೆಸಿದೆ. ಸಿದ್ದೇಶ್ ಹಠಾವೋ ದಾವಣಗೆರೆ ಬಚಾವೋ ಘೋಷಣೆ ಕೂಗಿದ ವಿರೋಧಿ ಬಣದ ಕಾರ್ಯಕರ್ತರು, ಗೋ ಬ್ಯಾಕ್ ಸಿದ್ದೇಶ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಪಕ್ಷದ ಹೈ ಕಮಾಂಡ್ಗೆ ಆಗ್ರಹ ಮಾಡಿದ್ದಾರೆ.