ಕಲಬುರ್ಗಿ:- ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲುಕಿನ ಗಾಣಗಾಪುದದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಜರುಗಿದೆ.
ಮಗಳಂತೆ ಕಂಡಿದ್ದ ಆ ನಟಿಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್..!
ಕೊಲೆಯಾಗಿರುವ ಯುವಕನ ಹೆಸರು ಮಹೇಶ್ ಕೋಲತೆ ಎನ್ನಲಾಗಿದೆ..ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಿವಾಸಿಯಾದ ಇತ, ವೃತ್ತಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಬಂದಿದ್ದವ, ಮಹಾರಾಷ್ಟ್ರದ ಹಲವೆಡೆ ಅಡ್ಡಾಡಿದ್ದ. ಬಳಿಕ ಕಲಬುರಗಿ ಜಿಲ್ಲೆಯ ಅಫಜಲಪುರಕ್ಕೆ ಬಂದು, ಇಲ್ಲಿನ ಪ್ರಸಿದ್ದ ಗಾಣಗಾಪುರದ ದತ್ತನ ದರ್ಶನ ಪಡೆದುಕೊಂಡು ಕುಟುಂಬಸ್ಥರಿಗೆ ಕರೆ ಮಾಡಿ ತಾನು ಗಾಣಗಾಪುರದಲ್ಲಿ ಇರೋದಾಗಿ ಹೇಳಿದ್ದ.
ಗಾಣಗಾಪುರದ ಸಂಗಮದಲ್ಲಿದ್ದ ಮಹೇಶ್ನನ್ನ ಅದ್ಯಾರೋ ದುಷ್ಕರ್ಮಿಗಳು ಸಂಗಮ ಪಕ್ಕದಲ್ಲೆ ಇರುವ ಜಮೀನಿನಲ್ಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕ ಜಮೀನಿಗೆ ಬಂದಾಗಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಕೊಲೆಯಾದ ಮಹೇಶ್ ಈ ಹಿಂದೆಯೂ ಕೂಡ ಒಂದೊಂದು ಸಾರಿ ಮನೆ ಬಿಟ್ಟು ಹಲವು ವಾರಗಳ ಕಾಲ ವಾಪಸ್ ಮನೆಗ ಬರ್ತಿರಲಿಲ್ಲವಂತೆ. ಮನೆಯಿಂದ ಹೋದವನು ಮಹಾರಾಷ್ಟ್ರದ ಕೊಲ್ಲಾಪುರ ಮುಕಾಂಬಿಕ, ತುಳಾಜಪುರದ ಅಂಭಾಭವಾನಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದನಂತೆ. ಈ ಬಾರಿಯೂ ಕೂಡ ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟವನು ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾನೆ. ಬಳಿಕ ಗಾಣಗಾಪುರಕ್ಕೆ ಬಂದು ದರ್ಶನ ಪಡೆದು, ತಾಯಿಗೆ ಕರೆ ಮಾಡಿ ಹೇಳಿದ್ದಾನೆ.
ಆದ್ರೆ, ಗಾಣಗಾಪುರದಲ್ಲಿರುವ ಮಹೇಶ್ನನ್ನ ಅದ್ಯಾರೋ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮಹೇಶ್ ನನ್ನ ಯಾರು ಕೊಲೆ ಮಾಡಿದರೂ, ಯಾವ ಕಾರಣಕ್ಕೆ ಕೊಲೆ ಮಾಡಿದ್ರು ಎನ್ನುವುದು ಮಾತ್ರ ನಿಗೂಢವಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)