ಬೆಂಗಳೂರು:- ಕುಮಾರಪಾರ್ಕ್ ವೆಸ್ಟ್ ನ ನಿವಾಸಿಯಾಗಿರುವ ವಿಪ್ಲವಿ
ವಕೀಲೆಯಾಗಿ ಇಂಗ್ಲೆಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಮಾರಪಾರ್ಕ್ ಬಳಿ ಕಂಪನಿ ಹಾಗೂ ಮನೆ ಹೊಂದಿದ್ದರು. ಇಲ್ಲಿ ವಾಸವಾಗಿದ್ದಾಗ ಹಲವು ವರ್ಷಗಳಿಂದ ಮೂರು ಬೀದಿ ನಾಯಿ ಸಾಕಿದ್ದರು. ಬಳಿಕ ಪತಿ ಜೊತೆ ವಿಪ್ಲವಿ ಲಂಡನ್ಗೆ ಹೋಗಿ ನೆಲೆಸಿದ್ರು,
ಅವರ ಅನುಪಸ್ಥಿತಿಯಲ್ಲಿ ಅವರ ಕಂಪನಿ ಅಕೌಂಟೆಂಟ್ ಆಗಿದ್ದ ಪ್ರಕಾಶ್ ಆ ಬೀದಿ ನಾಯಿಗಳನ್ನು ಪೋಷಿಸುತ್ತಿದ್ದರು. ನಾಯಿಗಳಿಗೆ ಪ್ರತಿನಿತ್ಯ ಮೂರು ಹೊತ್ತು ಆಹಾರ ಕೊಟ್ಟು ಆರೈಕೆ ಮಾಡುತ್ತಿದ್ದರು. ಅಕ್ಟೋಬರ್ 4ರಿಂದ 20ರ ಅವಧಿಯಲ್ಲಿ ಮೂರೂ ನಾಯಿಗಳು ಇದ್ದಕ್ಕಿದ್ದಂತೆ ಕಾಣೆಯಾಗಿವೆ.
ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಪ್ರಕಾಶ್ ಎಷ್ಟೆ ಹುಡುಕಿದ್ರು ನಾಯಿ ಸಿಗದ ಕಾರಣ, ನವೆಂವರ್ 30ನೇ ತಾರೀಕು ವಿಪ್ಲವಿ ಸೀದಾ ಕೆಲಸಕ್ಕೆ ರಜೆ ಹಾಕಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಂಗಳೂರಿಗೆ ಬಂದು ನಿರಂತರವಾಗಿ ಬೀದಿನಾಯಿಗಳಿಗಾಗಿ ಇನ್ನೂ ಹುಡುಕಾಟ.
ಈಗ ಇನ್ನೂ ಸುಳಿವು ಸಿಗದ ಹಿನ್ನೆಲೆ ಬಿಎಂಟಿಸಿಯಲ್ಲೂ ಫೋಸ್ಟರ್ ಹಾಕಿಸಿ, ಸುಳಿವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.