ನವದೆಹಲಿ:– ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ ಆಗಿದ್ದು, ಸಿಪಿಆರ್ ಮಾಡಿ ಅಧಿಕಾರಿಗಳು ಉಳಿಸಿದ ಘಟನೆ ಜರುಗಿದೆ.
ಸತ್ತ ಹೆಂಡತಿಗೆ ಮರುಜೀವ ಕೊಟ್ಟ ಗಂಡ: ಮುಂದೆ ಕಾದಿತ್ತು ಪತಿಗೆ ಆಘಾತ; ಈ ಸ್ಟೋರಿ ಮಿಸ್ ಮಾಡ್ದೆ ನೋಡಿ!
ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಅರ್ಷಿದ್ ಅಯೂಬ್ ಎಂದು ಗುರುತಿಸಲಾಗಿದ್ದು, ಅವರು ಆ ಸಮಯದಲ್ಲಿ ವಿಮಾನ ಹತ್ತಲು ತಯಾರಿ ನಡೆಸುತ್ತಿದ್ದರು. ಆದರೆ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಗ ಅವರ ಸುತ್ತ ಜನರು ತುಂಬಿಕೊಂಡರು. ಆಗ ಅಲ್ಲಿಗೆ ಬಂದ ಸಿಐಎಸ್ಎಫ್ ಸಿಬ್ಬಂದಿಗಳಲ್ಲಿ ಒಬ್ಬರು ಅವರಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ತಮ್ಮ ಸಿಬ್ಬಂದಿಯ ತ್ವರಿತ ಕ್ರಮವು ಪ್ರಯಾಣಿಕ ಅರ್ಷಿದ್ ಅಯೂಬ್ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಸಿಐಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಬುಧವಾರ ಬೆಳಗ್ಗೆ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 2ರಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಅಯೂಬ್ ಹೃದಯ ಸ್ತಂಭನದಿಂದಾಗಿ ಕುಸಿದುಬಿದ್ದಿದ್ದರು. ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಿಐಎಸ್ಎಫ್ ತಿಳಿಸಿದೆ.
ಸಾಮಾನು ಸರಂಜಾಮಿನ ಟ್ರಾಲಿಯೊಂದಿಗೆ ನಿಂತಿದ್ದಾಗ ಅಯೂಬ್ ನೆಲಕ್ಕೆ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಸ್ತು ತಿರುಗುತ್ತಿದ್ದ ಸಿಐಎಸ್ಎಫ್ ಅಧಿಕಾರಿ ಡಾ. ಪ್ರಿಯಾ ಸಹಾಯಕ್ಕೆ ಧಾವಿಸಿದರು. ಹೃದಯ ನಿಂತಾಗ ಉಸಿರಾಟ ಮತ್ತು ರಕ್ತಪರಿಚಲನೆಯನ್ನು ಪುನಃಸ್ಥಾಪಿಸಲು ಬಳಸುವ ನಿರ್ಣಾಯಕ ತುರ್ತು ಕಾರ್ಯವಿಧಾನವಾದ ಸಿಪಿಆರ್ಅನ್ನು ಅವರು ಮಾಡಿದರು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಅನೇಕರು ಸಿಬ್ಬಂದಿಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.