ಗದಗ:- ಪ್ರತ್ಯೇಕ ದಕ್ಷಿಣ ಭಾರತದ ಬೇಡಿಕೆ ಇಟ್ಟ ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ
ಈ ಸಂಬಂಧ ಮಾತನಾಡಿದ ಅವರು, ಸುರೇಶ್ ಆಗ ರೀತಿ ಹೇಳಬೇಕಾದರೆ ಅವರಿಗೆ ಎಷ್ಟು ಕೋಪ ಬಂದಿರಬೇಕು. ಇಡೀ ದಕ್ಷಿಣ ಭಾಗದ ಐದು ರಾಜ್ಯಗಳಿಗೆ ಕೇವಲ 1.8 ಲಕ್ಷ ಕೋಟಿ ಕೊಟ್ಟಿದ್ದೀರಿ. ಆದರೆ ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ 2 ಲಕ್ಷ ಕೋಟಿ ಕೊಟ್ಟಿದ್ದೀರಿ. ಕರ್ನಾಟಕದಿಂದ 4 ಲಕ್ಷ ಕೋಟಿ ಜಿಎಸ್ ಟಿ ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಆದರೆ ಇವರು ಬಜೆಟ್ ನಲ್ಲಿ ಕೇವಲ 50 ಸಾವಿರ ಕೋಟಿ ಮಾತ್ರ ಕೊಟ್ಟಿದ್ದೀರಿ. ದೇಶ ಅಖಂಡವಾಗಿಯೇ ಇರಬೇಕು ಆದರೆ ನಮಗೆ ಕೊಡಬೇಕಾಗಿರೋದನ್ನ ಕೊಡಬೇಕು. ನಮಗೆ ಕಡಿಮೆ ಕೊಡ್ತಿರೋದಕ್ಕೆ ಒಳಗೊಳಗೆ ಖುಷಿ ಪಡ್ತಾರೆ. 123 ತಾಲೂಕಿನಲ್ಲಿ ಬರಗಾಲ ಘೋಷಣೆ ಮಾಡಲಾಗಿದೆ ಒಂದು ಕಾಸು ಬಿಡಿಗಾಸು ಕೊಟ್ಟಿದಾರೆಯೇ…?
ಇದು ಮಲತಾಯಿ ಧೋರಣೆ ಅಲ್ವೇ, ಆ ಕೋಪಕ್ಕೆ ಹೇಳಿದ್ದಾರೆ ಅಷ್ಟೇ. ಅಖಂಡ ಭಾರತ ಕಾಂಗ್ರೆಸ್ ನ ಕೂಸು ಅಂತ ಎಐಸಿಸಿ ಅಧ್ಯಕ್ಷೆರೇ ಹೇಳಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಬಿಜೆಪಿಯವರದು ಸಾಸುವೆ ಕಾಳಷ್ಟು ಕೊಡುಗೆ ಇಲ್ಲ. ಬರಗಾಲಕ್ಕೆ ಬಿಜೆಪಿಯವರದೇನು ಕೊಡುಗೆ ಇದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಟೆಂಡರ್ ಜರುಗಿಸಿ ಬಸ್ ಖರೀದಿಸಲಾಗುವುದು. ಒಟ್ಟಾರೆ 5000 ಬಸ್ ಖರೀದಿ ಮಾಡಿ ಮಾರ್ಚ್ ಅಂತ್ಯಕ್ಕೆ ಪೂರೈಕೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ ಗಳ ಲೋಕಾರ್ಪಣೆ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಳೆದ 7 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಸರ್ಕಾರ 9 ಸಾವಿರ ಹುದ್ದೆ ನೇಮಕಾತಿಗೆ ಅನುಮತಿ ನೀಡಿದ್ದು, ಆಯಾ ವಿಭಾಗೀಯ ಸಂಸ್ಥೆಗಳಿಗೆ ನೇಮಕಾತಿ ಜವಾಬ್ದಾರಿ ನೀಡಲಾಗಿದೆ ಎಂದರು.