ಹುಬ್ಬಳ್ಳಿ:ಕಾನೂನು ಶಿಕ್ಷಣ, ವಕೀಲ ವೃತ್ತಿ, ನ್ಯಾಯಾಂಗ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾನೂನು ಪದವೀಧರರಿಗೆ ನಡೆಸುವ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆಯನ್ನು ವಕೀಲರ ಸನ್ನದ್ ಕೊಡುವ ಮುಂಚೆಯೇ ನಡೆಸಬೇಕು ಎಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಬೆಳ್ಳಂಬೆಳಿಗ್ಗೆ ಪೊಲೀಸರ ಗನ್ ಸದ್ದು : ರೌಡಿಶೀಟರ್ ಕಾಲಿಗೆ ಗುಂಡೇಟು!
ಈ ಕುರಿತು ಮಾತನಾಡಿದ ಅವರು, ವಕೀಲರಿಗೆ ಸನ್ನದ್ ಕೊಟ್ಟ ಮೇಲೆ ಅಖಿಲ ಭಾರತ ಬಾರ್ ಕೌನ್ಸಿಲ್ ಪರೀಕ್ಷೆ ತೇರ್ಗಡೆಯಾಗಬೇಕು ಎನ್ನುವುದು ಪ್ರಾಕ್ಟಿಸ್ ಮಾಡುತ್ತಿರುವ ವಕೀಲರಿಗೆ ತೊಂದರೆಯಾಗಲಿದೆ. ಹೀಗಾಗಿ ಮೊದಲೆ ಪರೀಕ್ಷೆ ಮಾಡಿಸಬೇಕು. ಜೆಎಂಎಫ್ಸಿ ಅಥವಾ ವಿಚಾರಣಾ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿ ಅಥವಾ ನ್ಯಾಯಾಧೀಶರ ನೇಮಕವಾಗಲು ಕೇಂದ್ರ ಮತ್ತು ರಾಜ್ಯ ಸರಕಾರ ಮತ್ತು ಎಲ್ಲಾ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮ ಮತ್ತು ನಿಗದಿತ ನಿಂಬಧನೆಗಳು(ಪ್ರಾಕ್ಟಿಸ್) ಮೂರು ವರ್ಷಗಳು ಕಡ್ಡಾಯವಾಗಿ ಮಾಡಬೇಕು ಎಂದು ಬದಲಾವಣೆ ಮಾಡಬೇಕು ಎಂದರು.
ಕಾನೂನು ವಿಶ್ವವಿದ್ಯಾಲಯ ಹಾಗೂ ಕಾನೂನು ವಿದ್ಯಾರ್ಥಿಗಳಲ್ಲಿ ಶಿಸ್ತು ತರುವ ನಿಟ್ಟಿನಲ್ಲಿ ನೀಟ್ ಮಾದರಿಯಡಿ ತರಬೇಕು. ಸಿಇಟಿ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಆಯ್ಕೆ ಮಾಡಬೇಕು. ವಯಸ್ಸಿನ ಮಿತಿ ಸೇರಿದಂತೆ ಏಕರೂಪತೆ ಕಾಪಾಡಿಕೊಂಡು ಶಿಕ್ಷಣ ನೀಡಬೇಕು. ನಿವೃತ್ತ ನ್ಯಾಯಾಧೀಶರು, ಪಬ್ಲಿಕ್ ಪ್ರಾಸಿಕ್ಯೂಟರ್, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ಗಳಿಗೆ ಎಲ್ಲಾ ಬಾರ್ ಕೌನ್ಸಿಲ್ ಅವರು ಚೇಂಬರ್ ಅಭ್ಯಾಸಕ್ಕೆ ಮಾತ್ರ ಅವಕಾಶ ನೀಡಬೇಕು. ಓಪನ್ ಕೋರ್ಟ್ಗೆ ನಿರ್ಬಂಧಿಸಬೇಕು. ಇದರಿಂದ ಯುವ ವಕೀಲರಿಗೆ ಆಧ್ಯತೆ ಸಿಗುತ್ತದೆ ಎಂದರು.
ಈ ಎಲ್ಲ ವಿಚಾರಗಳ ಕುರಿತು ಅಕ್ಟೋಬರ್ ೮ ರಂದು ಕೊಪ್ಪಳದಲ್ಲಿ ವಕೀಲರ ಪೂರ್ವಭಾವಿ ಸಭೆ ನಡೆಸಲಾಗುವುದು. ಎಲ್ಲ ವಕೀಲರ ಸಂಘಗಳಿಗೂ ಈ ಕುರಿತು ಮನವರಿಕೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ವೀರುಪಾಕ್ಷಪ್ಪ ಕಟ್ಟಿಮನಿ, ವಿ.ಎಸ್. ಉದಯಸಿಂಗ್, ಸಂಗಮೇಶ, ಬಸವರಾಜ ಮೇಲಸಕ್ರಿ, ಡಾ. ಬಸವರಾಜ ಇದ್ದರು.