ತುಮಕೂರು:- ತಾಲೂಕಿನ ಮಾಜಾರ್ ಅಯ್ಯನಪಾಳ್ಯ ಗ್ರಾಮದಲ್ಲಿ ಹುಲ್ಲು ಕತ್ತರಿಸಲು ಹೋದಾಗ ಬೃಹತ್ ಗಾತ್ರದ ಹೆಬ್ಬಾವಿನಿಂದ ವ್ಯಕ್ತಿ ಪಾರಾದ ಘಟನೆ ಜರುಗಿದೆ.
ಗುಡಾಣದಂತಿರುವ ನಿಮ್ಮ ಹೊಟ್ಟೆ ಬೇಗ ಕರಗಬೇಕಾ!?, ಹಾಗಿದ್ರೆ ಈ ಬೀಜ ತಪ್ಪದೇ ಸೇವಿಸಿ!
ಪುಟ್ಟಯ್ಯ ನರಸಿಂಹ ಗೌಡ ಮನೆಯ ಹಿತ್ತಲಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಹಾವು ಕಂಡ ಪುನೀತ್ ತುಮಕೂರಿನ ವಾರಂಗಲ್ ವಾನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಗರ ರಕ್ಷಕರಾದ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ 13 ಅಡಿ 10 ಕೆಜಿಯ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿದ ಬಳಿಕ ರಕ್ಷಣೆ ಮಾಡಿದ್ದ ಹೆಬ್ಬಾವನ್ನು ದೇವರಾಯನದುರ್ಗ ಅರಣ್ಯಕ್ಕೆ ಬಿಡಲಾಗಿದೆ