ಗದಗ: ಬರ ಪರಿಸ್ಥಿತಿ ಬಗ್ಗೆ ಗಮನ ಕೊಡಬೇಕಿದ್ದ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಹೌದು ರಾಜ್ಯ ಎಂಥ ಸಂಕಷ್ಟದಲ್ಲಿದೆ ಎಂಬ ಕಿಂಚಿತ್ ಪರಿವೆಯೂ ಅವನಿಗಿದ್ದಂತಿಲ್ಲ. ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಬೇಸಿಗೆಯಲ್ಲಿ ಕುಡಿಯಲು ಸಹ ನೀರು ಸಿಗದ ಆತಂಕವಿದೆ. ರೈತರ ದನಕರುಗಳಿಗೆ ತಿನ್ನಲು ಮೇವಿಲ್ಲ.
ಇದರ ಮಧ್ಯೆ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಅವರ 48 ನೇ ವರ್ಷದ ಹುಟ್ಟು ಹಬ್ಬವನ್ನ ಸಂಜೆ ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ ಮಾಡ್ಲಾಗಿದೆ.. ಫಯರ್ ವರ್ಕ್ ಸ್ವಾಗತದೊಂದಿದೆ ತಹಶೀಲ್ದಾರ್ ಸಾಹೇಬರಿಗೆ ಸ್ವಾಗತಿಸಿ ಕೇಕ್ ಕಟ್ ಮಾಡ್ಲಾಗಿದೆ.. ತಹಶೀಲ್ದಾರ್ ಅವರು ಹಾಡು ಹಾಡುವ ಮೂಲಕ ಸಭಿಕರನ್ನ ರಂಜಿಸುವ ಕೆಲಸವನ್ನೂ ಮಾಡಿದ್ದಾರೆ.. ಬರ ಪರಿಸ್ಥಿತಿ ಬಗ್ಗೆ ಗಮನ ಕೊಡಬೇಕಿದ್ದ ತಹಶೀಲ್ದಾರ್ ಸಾಹೇಬರು ಅದ್ಧೂರಿ ಹುಟ್ಟು ಹಬ್ಬದ ಮಾಡ್ಕೊಂಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.