ಹಾವೇರಿ :- ಕಾಡಾನೆಗಳ ದಾಳಿಗೆ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಹಿರೇಕೌಂಶಿ ಗ್ರಾಮಗಳಲ್ಲಿ ಜರುಗಿದೆ.
ಸುಮಾರು 4 ಕಾಡಾನೆಗಳಿಂದ ದಾಳಿ ನಡೆದಿದೆ. ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರು ಪರದಾಟ ನಡೆಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹಚ್ಚಿನ ಮೌಲ್ಯದ ಬಾಳೆ,ಮೆಕ್ಕೆಜೋಳ ಬೆಳೆಗಳ ನಾಶವಾಗಿದ್ದು, ರೈತರ ಜಮೀನುಗಳಲ್ಲಿ ಕಾಡಾನೆಗಳು ಸುತ್ತಾಡಿರುವುದನ್ನು ಗ್ರಾಮಸ್ಥರು ವೀಕ್ಷಿಸುತ್ತಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಹೊಲ,ಗದ್ದೆಗಳಿಗೆ ರೈತರು,ಸಾರ್ವಜನಿಕರು ತೆರಳದಂತೆ ಅನೌನ್ಸ್ ಮಾಡಲಾಗಿದೆ. ಹಾನಗಲ್ ಅರಣ್ಯಾಧಿಕಾರಿಗಳಿಂದ ಗ್ರಾಮಗಳ ಸುತ್ತಮುತ್ತ ಮೈಕ್ ನಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಬೇರೆ ಕಡೆ ಕಾಡಾನೆಗಳನ್ನು ಓಡಿಸಲು ಅಧಿಕಾರಿಗಳು ಶತ ಪ್ರಯತ್ನ ಮಾಡುತ್ತಿದ್ದಾರೆ. ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)