ಗದಗ: ಭಾರತೀಯ ಸೇನೆಯಲ್ಲಿ 28ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಹಿಂತಿರುಗಿದ ವೀರ-ಯೋಧನಿಗೆ ಜನರು ಭವ್ಯ ಸ್ವಾಗತ ಕೋರಿದ್ದಾರೆ. ವೀರ ಯೋಧನ ಪರ ಘೋಷಣೆ ಮೊಳಗಿಸುತ್ತಾ ಪಟಾಕಿ ಸಿಡಿಸಿ, ರೈಲ್ವೆ ನಿಲ್ದಾಣದಲ್ಲಿ ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಮಾಡಿ ಸಂಭ್ರಮಿಸಿದರು.
ತೆರೆದ ವಾಹನದಲ್ಲಿ ಬೆಟಗೇರಿಯ ಸ್ವಗೃಹದವರೆಗೆ ಮೇರವಣಿಗೆ ಮೂಲಕ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಸ್ವಾಗತ ಕೋರಲಾಯಿತು. ರೈಲ್ವೆ ನಿಲ್ದಾಣದಿಂದ ಝೆಂಡಾ ಸರ್ಕಲ್, ಅಂಬಾಭವಾನಿ ದೇವಸ್ಥಾನ ಮಾರ್ಗವಾಗಿ ತೆರಳಿದ ಮೇರವಣಿಗೆ ಮಾಡಿದ್ದಾರೆ.