ಗದಗ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಗದಗ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ರುದ್ರಪ್ಪ ಮಾರನಬಸರಿ ಅವರಿಗೆ ಗದಗ ರೈಲ್ವೇ ನಿಲ್ದಾಣದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಭವ್ಯ ಸ್ವಾಗತವನ್ನು ಕೋರಲಾಯಿತು.
ಹೂಮಳೆ ಗೈದು, ಹೂಮಾಲೆ ಹಾಕಿ ರಾಷ್ಟ್ರ ಧ್ವಜ ಹಿಡಿದು ನಿವೃತ್ತ ಯೋಧ ರುದ್ರಪ್ಪ ಹಾಗೂ ಕುಟುಂಬವರ್ಗವನ್ನ ಸನ್ಮಾನಿಸಲಾಯಿತು. ನಂತರ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಕರೆದೊಯ್ದು ನಿವೃತ್ತಿ ಜೀವನ ಸುಖವಾಗಿರಲೆಂದು ಹಾರೈಸಿದ್ರು. ಈ ಸಂದರ್ಭದಲ್ಲಿ ಮಾಜಿ ಸೈನಿಕರು, ವೀರನಾರಿಯರು ಸೇರಿದಂತೆ ದೇಶಭಕ್ತರು ಇದ್ರು