ಚಾಮರಾಜನಗರ:- ಹಣಕಾಸಿನ ವಿಚಾರದಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಜರುಗಿದೆ.
ಶಾಸಕ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ ಮಹೇಂದ್ರ ತಮ್ಮನ್ನವರ.. ತಿರುವು ಪಡೆದ ರಾಜಕೀಯ..!?
ತಾಲೂಕಿನ ಹೊಸೂರಿನ ಮಾದಪ (32) ಸಾವನ್ನಪ್ಪಿದ್ದ ವ್ಯಕ್ತಿ ಎನ್ನಲಾಗಿದೆ. ಕೊಲೆಯಾದ ಮಾದಪ್ಪ ಹಾಗೂ ದೊಡ್ಡ ಮಲ್ಲು ನಡುವೆ ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿದೆ. ನಂತರ ಒಬ್ಬರಿಗೊಬ್ಬರು ಹೊಡೆದಾಟ ನಡೆದು ಮಾದಪ್ಪ ಮಲ್ಲುಗೆ ಥಳಿಸಿದ್ದಾನೆ
ಎನ್ನಲಾಗಿದೆ. ನಂತರ ಮಲ್ಲು ಮಾದಪ್ಪನಿಗೆ ಹೊಡೆದಾಗ ಮಾದಪ್ಪ ಕುಸಿದು ಬಿದ್ದಿದ್ದಾನೆ.
ಕುಸಿದ ಬಿದ್ದ ಮಾದಪ್ಪನನ್ನು ಮಲ್ಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ಎನ್ನಲಾದ ಮಾದಪನ ಶವವನ್ನು ಗುಂಡ್ಲುಪೇಟೆ ಶವಾಗಾರಕ್ಕೆ ಸಾಗಿಸಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.