ಬಾಗಲಕೋಟೆ: ಚಲಿಸುತ್ತಿದ್ದ ಬಸ್ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕೆಳಗೆ ಬಿದ್ದು ಸಾವಿಗೀಡಾದ ಘಟನೆ ಮುಧೋಳ ಕುಳಲಿ ರಸ್ತೆಯಲ್ಲಿ ನಡೆದಿದೆ. ಮುಧೋಳದ ಸೋರಗಾವಿ ಗ್ರಾಮದ ಪ್ರಹ್ಲಾದ್ ಮುರಿಗೆಪ್ಪ ಮಾದರ (38) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಮುಧೋಳ ಮೂಲಕ ಬನಹಟ್ಟಿಗೆ ಬಸ್ ಹೊರಟಿತ್ತು. ಈ ವೇಳೆ ಬಸ್ನಲ್ಲಿ ಇಬ್ಬರು ಕುಡುಕರು ಗಲಾಟೆ ಶುರು ಮಾಡಿದ್ದಾರೆ.
Health Care: ರಾತ್ರಿಯಾದ್ರೆ ಕಾಲು ನೋವಿನ ಸಮಸ್ಯೆ ಕಾಡುತ್ತಿದೆಯಾ..? ಇಲ್ಲಿದೆ ನೋಡಿ ಮನೆಮದ್ದುಗಳು
ಬಳಿಕ ಓರ್ವ ಕುಡುಕ ಮತ್ತೋರ್ವನನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದಾನೆ. ಈ ವೇಳೆ ಚರಂಡಿಗೆ ಬಿದ್ದ ಪ್ರಹ್ಲಾದ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಮುಧೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಆರೋಪಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.