ತುಮಕೂರು:- ನಿಂತಿದ್ದ ಟ್ರ್ಯಾಕ್ಟರ್ಗೆ ಟವೆರಾ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ-ಮಧುಗಿರಿ ರಸ್ತೆಯ ಉಲ್ಲಾಸ್ ತೋಪು ಬಳಿ ಜರುಗಿದೆ.
ಟವೇರಾ ಕಾರಿನಲ್ಲಿದ್ದ ರೇಖಾ ಹಾಗೂ ಚಾಲಕ ಮನು ಎಂಬುವವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಕಮಲಮ್ಮ, ಸಾಗರ ಮತ್ತು ಸರಸ್ವತಮ್ಮ ಸೇರಿ ನಾಲ್ವರಿಗೆ ಗಾಯವಾಗಿದ್ದು, ಶಿರಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿಮೆಂಟ್ ಇಟ್ಟಿಗೆ ತುಂಬಿ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿದೆ. ಮೃತರು, ಗಾಯಾಳುಗಳು ಶಿರಾ ತಾಲ್ಲೂಕಿನ ಯಲಿಯೂರು, ಹೆಗ್ಗನಹಳ್ಳಿ ಮೂಲದವರಾಗಿದ್ದು, ಕುನಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ಪೂಜೆಮುಗಿಸಿ ವಾಪಸ್ಸಾಗ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪತಿ ಭಾನುಪ್ರಕಾಶ್ ಶಬರಿಮಲೆಗೆ ತೆರಳಿದ ಬಳಿಕ ಶನಿಮಹಾತ್ಮ ದೇವಾಲಯಕ್ಕೆ ತೆರಳಿದ್ದರು. ಈ ಕುರಿತು ಶಿರಾ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.