ಬಳ್ಳಾರಿ:- ಜಿಲ್ಲೆಯ ಹೊಸ ದರೋಜಿ ಸಮೀಪದಲ್ಲಿ ನಿಂತ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ, ಇಬ್ಬರು ಮಕ್ಕಳು ಮೃತ ಪಟ್ಟಿರುವ ಘಟನೆ ಜರುಗಿದೆ.
ಮೃತನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯ ವೆಂಕಟೇಶ್(45), ಆಶಾ(8), ಅಖಿಲಾ(6) ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿ ಗಾಯಗೊಂಡಿದ್ದಾರೆ
ಜಂಬಕ್ಕ ಅವರು ತಮ್ಮ ಮಕ್ಕಳಾದ ಸರಸ್ವತಿ, ಆಶಾ ಮತ್ತು ಅಖಿಲಾಳೊಂದಿಗೆ ತಮ್ಮ ತವರೂರು ಆಂಧ್ರದ ಅರಿಕೇರಿಗೆ ಹೋಗಿ ಉಡಿತುಂಬಿಕೊಂಡು ಗಂಡನಮನೆ ಜಂಬುನಾಥನ ಹಳ್ಳಿಗೆ ಬಳ್ಳಾರಿವರೆಗೆ ಬಸ್ಸಿನಲ್ಲಿ ಬಂದಿದ್ದಾರೆ. ಜಂಬುನಾಥ ಹಳ್ಳಿಯ ಗ್ರಾಮದ ವೆಂಕಟೇಶ್ ಅವರು ಬಳ್ಳಾರಿಯಿಂದ ಬೈಕ್ ನಲ್ಲಿ ಊರಿಗೆ ಹೋಗುತ್ತಿದ್ದಾನೆ. ಇವರಿಗೆ ಊರಿಗೆ ಬಿಡುವುದಾಗಿ ಕರೆದುಕೊಂಡು ಹೋಗಿದ್ದಾನೆ.
ಬೈಕ್ ನಿಂತ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಮೂವರು ಮೃತ ಪಟ್ಟಿದ್ದಾರೆ. ಜಂಬಕ್ಕ ಮತ್ತು ಸರಸ್ವತಿಗೆ ಗಾಯಗಳಾಗಿದ್ದು ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.