ಕೋಲಾರ : ಕಲ್ಲು ಕ್ರಷ್ ಮಾಡುವಾಗ ಬ್ಲಾಸ್ಟಿಂಗ್ ವೇಳೆ ಕಲ್ಲು ಬಿದ್ದು ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್ನ ಮಾಕಾರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಆಂಧ್ರ ಮೂಲದ ಕಾರ್ಮಿಕ ವೆಂಕಟೇಶ್ (೬೦) ಎಂದು ಗುರುತಿಸಲಾಗಿದೆ. ಹರೀಶ್ ಮತ್ತು ಈಶ್ಚರ್ ಎಂಬುವರಿಗೆ ಗಾಯಗಳಾಗಿವೆ.
ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ
ಬ್ಲಾಸ್ಟಿಂಗ್ ತಯಾರಿ ವೇಳೆ ಕಲ್ಲು ಬಂಡೆ ಬಿದ್ದು ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.