ಯಾವುದೇ ಜೀವಿಗಳಿಗೆ ಮಲ ವಿಸರ್ಜನೆಯು ದೇಹದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಅದರಲ್ಲೂ ಮನುಷ್ಯನ ದೇಹದಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ ಎಂಬುದು ಸಹಜ. ನಾವು ಸಾಮಾನ್ಯವಾಗಿ ಮಲ ವಿಸರ್ಜನೆ ಮಾಡುವಾಗ ಪರಿಶೀಲಿಸುವುದು ಬಹಳ ಕಡಿಮೆ ಎನ್ನಬಹುದು. ಆದರೆ ಅದು ನಮಗೆ ಅಸಹ್ಯ ಅನಿಸಿದರೂ ಸಹ ಇದರ ಬಗ್ಗೆ ಪರಿಶೀಲನೆ ಮಾಡುವುದು ತುಂಬಾ ಅವಶ್ಯಕ.
ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬರುವುದರಿಂದ, ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಬನ್ನಿ ಇಂದಿನ ಲೇಖನದಲ್ಲಿ ಸರಿಯಾಗಿ ಮಲವಿಸರ್ಜನೆ ಆಗದೇ ಇದ್ದರೆ, ಅದರ ಹಿಂದಿನ ಕಾರಣಗಳು ಏನು ಎನ್ನುವುದರ ಬಗ್ಗೆ ನೋಡೋಣ ಬನ್ನಿ…
ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡು ಬರುವುದು ನಮಗೆಲ್ಲಾ ಗೊತ್ತೆ ಇದೆ. ಇದಕ್ಕೆ ಪರಿಹಾರ ಎಂದರೆ, ಸರಿ ಯಾಗಿ ನೀರು ಕುಡಿಯುವುದು ಒಂದೇ ಮಾರ್ಗ ಎಂದು ಹೇಳಬಹುದು.
ಒಂದು ವೇಳೆ ನಮ್ಮ ದೇಹಕ್ಕೆ ನೀರಿನ ಪ್ರಮಾಣ ಕಡಿಮೆ ಯಾದರೆ, ನಿರ್ಜಲೀಕರಣ ಸಮಸ್ಯೆ ಕಂಡು ಬರುವುದರ ಜೊತೆಗೆ, ಮಲಬದ್ಧತೆ ಸಮಸ್ಯೆಗಳು ಕೂಡ ಕಂಡು ಬರು ತ್ತದೆ. ಪ್ರಮುಖವಾಗಿ ದೇಹದಲ್ಲಿ ನೀರಿನಾಂಶ ಕಡಿಮೆ ಆಗುತ್ತಾ ಹೋದಂತೆ ಮಲಬದ್ಧತೆ ಸಮಸ್ಯೆ ಕೂಡ ಸಾಕಷ್ಟು ತೊಂ ದರೆ ಕೊಡುತ್ತದೆ.
ಹೀಗಾಗಿ ಸರಿಯಾಗಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಮಲವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ.
ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗಿ, ಕರುಳಿನ ಮೂಲಕ ಹೊರಬರಲು ಕಷ್ಟ ಪಡುತ್ತಿರುವ ಸಂದರ್ಭ ದಲ್ಲಿ ಹೆಚ್ಚಿಗೆ ನೀರನ್ನು ಕುಡಿಯುವುದರಿಂದ ಈ ಸಮಸ್ಯೆ ಯಿಂದ ಪರಿಹಾರ ಕಂಡುಕೊಳ್ಳಬಹುದು.
ಹೀಗಾಗಿ ಪ್ರತಿದಿನ ಖಾಲಿ ಹೊಟ್ಟೆಗೆ ಒಂದ ಉಗುರು ಬೆಚ್ಚ ಗಿನ ನೀರನ್ನು ಪ್ರತಿಬಾರಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಿ.
ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ನರ ನಾಡಿಗಳಿಗೆಲ್ಲಾ ರಕ್ತ ಸಂಚಾರ ಹೆಚ್ಚಾಗುತ್ತದೆ, ಮೂಳೆ ಗಳು ಬಲಿಷ್ಠವಾಗುತ್ತವೆ, ಹಲವಾರು ಆರೋಗ್ಯ ಸಮಸ್ಯೆ ಗಳು ನಮ್ಮಿಂದ ದೂರವಾಗುತ್ತದೆ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ.
ಅದೇ ರೀತಿಯಾಗಿ ಮಲವಿಸರ್ಜನೆಯ ವಿಚಾರದಲ್ಲಿ ಕೂಡ ಅಷ್ಟೇ, ಪ್ರತಿದಿನ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.
ಪ್ರಮುಖವಾಗಿ ಜೀರ್ಣಾಂಗ ಮತ್ತು ಕರುಳಿನ ಭಾಗ ತನ್ನ ಕಾರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ನೆರವಾಗುತ್ತದೆ. ಹೀಗಾಗಿ ಪ್ರತಿದಿನ ಅರ್ಧ ಗಂಟೆ ಗಳ ಕಾಲ ವ್ಯಾಯಾಮ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.
ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವಂತಹ ಒಣದ್ರಾಕ್ಷಿಯು ಅರೋಗ್ಯಕ್ಕೆ ಬಹಳ ಒಳ್ಳೆಯದು.
ಪ್ರಮುಖವಾಗಿ ಒಣ ದ್ರಾಕ್ಷಿಯಲ್ಲಿ ಹೇರಳವಾಗಿ ನಾರಿ ನಾಂಶ ಕಂಡು ಬರುತ್ತದೆ. ಹೀಗಾಗಿ ಪ್ರತಿದಿನ ಮೂರು-ನಾಲ್ಕು ಒಣದ್ರಾಕ್ಷಿಯನ್ನು ನೆನೆಸಿಟ್ಟು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳುವುದರಿಂದ ಮಲವಿಸರ್ಜನೆ ಪ್ರಕ್ರಿ ಯೆಯು ಸರಾಗವಾಗಿ ನಡೆಯಲು ಸಹಾಯವಾಗುವುದು.
ಮಲವಿಸರ್ಜನೆ ಸಮಸ್ಯೆ ಎದುರಿಸುತ್ತಿರುವವರು, ನಾರಿ ನಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಉತ್ತಮ.
ಯಾಕೆಂದರೆ ಆಹಾರ ಸೇವನೆಯಲ್ಲಿ ನಾರಿನಾಂಶ ಕಡಿಮೆ ಯಾದರೆ, ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗು ವುದಿಲ್ಲ, ಇದರಿಂದ ಅಜೀರ್ಣತೆ, ಮಲ ಬದ್ಧತೆ ಸಮಸ್ಯೆ ಎದುರಾಗಿ ಮಲವಿಸರ್ಜನೆ ಸರಾಗವಾಗಿ ಆಗುವುದಿಲ್ಲ.
ಇದಕ್ಕಾಗಿ ನಾರಿನಾಂಶ ಹೆಚ್ಚಾಗಿರುವ ಹಸಿರೆಲೆ ಸೊಪ್ಪು, ಬೀಟ್ರೂಟ್, ಬ್ರೊಕೋಲಿ ಅವಕ್ಯಾಡೊ ಅಥವಾ ಬೆಣ್ಣೆ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ
ದಿನಕ್ಕೆ ಒಂದು ಬಾರಿ ಸ್ಟ್ರಾಂಗ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಯಾಕೆಂದ್ರೆ ಕಾಫಿಯಲ್ಲಿ ಕಂಡು ಬರುವ ಕೆಫೀನ್ ಅಂ ಶವು, ಮಲವಿಸರ್ಜನೆ ಸರಾಗವಾಗಿ ನಡೆದು, ಕರುಳಿನ ಭಾಗದಲ್ಲಿ ಎಲ್ಲಿಯೂ ಸಹ ಮಲಗಟ್ಟಿ ಆಗದಂತೆ ತಡೆ ಯುತ್ತದೆ.
ಹೀಗಾಗಿ ಮಿತವಾಗಿ ದಿನಕ್ಕೆ ಒಮ್ಮೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಮಲವಿಸರ್ಜನೆ ಸರಾಗ ವಾಗಿ ಆಗಲು ನೆರವಾಗುತ್ತದೆ.
ಇನ್ನು ಈ ಸಮಸ್ಯೆ ಇರುವವರು, ಹಾಲಿನ ಉಪ ಉತ್ಪನ್ನ ವಾದ ಮೊಸರನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು. ಯಾಕೆಂದ್ರೆ ಇದು ಪ್ರೋಬ ಯೋಟಿಕ್ ಆಹಾರ ಪದಾರ್ಥವಾಗಿದೆ.
ಪ್ರಮುಖವಾಗಿ ಮೊಸರಿನಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಜೀರ್ಣಾಂಗ ವ್ಯವಸ್ಥೆಗೆ ಸೇರಿದಂತೆ ಕರುಳಿಗೆ ಸಹಕಾರಿಯಾದ ಅತ್ಯುತ್ತಮ ಬ್ಯಾಕ್ಟೀರಿಯಾ ಗಳು ಅಡಗಿವೆ.
ಪ್ರಮುಖವಾಗಿ ಕರುಳಿನ ಭಾಗದಲ್ಲಿ ಮಲ ಹೆಚ್ಚು ಗಟ್ಟಿ ಯಾಗಿ ಹೊರಬರಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಮೊಸರನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ, ಉತ್ತಮ ಫಲಿತಾಂಶವನ್ನು ಕಾಣಬಹು ದಾಗಿದೆ.