ಬೆಂಗಳೂರು:- ಕೆಪಿಸಿಸಿ ಅಧ್ಯಕನಾಗಿ ನಾನೇ ಮುಂದುವರಿಯುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವದಂತಿ ಹಬ್ಬಿಸೋದು ನಿಲ್ಲಿಸಿ: ನಿವೃತ್ತಿ ಪ್ರಶ್ನೆಗೆ ತ್ರಿಮೂರ್ತಿಗಳ ಖಡಕ್ ಉತ್ತರ!
ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾರ್ಯಕರ್ತರಿಗೆ ವೇತನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಗ್ಯಾರಂಟಿ ಸಮಿತಿ ಮಾಡಿದ್ದೇವೆ ಐದು ವರ್ಷ ನಾನೇ ಅಧ್ಯಕ್ಷ ನಾಗಿದ್ದೇನೆ. ಪಕ್ಷಕ್ಕೆ ಯಾರು ದುಡಿದ್ದಾರೆ, ಅಂತವರನ್ನ ಗುರುತಿಸೋ ಕೆಲಸ ಮಾಡಿದ್ದೇವೆ. ಶಾಸಕರ ಅಧಿಕಾರ ನಾವೇನು ಕಿತ್ತುಕೊಂಡಿಲ್ಲ. ಶಾಸಕರಿಗೆ ಇರೋ ಅಧಿಕಾರ ಮುಂದುವರಿಯುತ್ತದೆ. ಅನ್ಯಾಯ ಆಗಿದ್ದವರಿಗೆ ಪರಿಹರಿಸೋದಕ್ಕೆ ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಯಾವ ಕಾರಣಕ್ಕೂ ಬದ್ಧತೆ ಬದಲಾವಣೆ ಮಾಡಲ್ಲ. ಅಧ್ಯಕ್ಷರನ್ನ ನಾವು ಬದಲಾಯಿಸೋದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೋರಾಟ ಮಾಡೋವರಿಗೆ ನಾವು ಬೇಡ ಅಂತ ಹೇಳಲ್ಲ. ಅವರಿಗೂ ಅರಿವಿದೆ, ಇದು ರಾಜಕೀಯ ಕಾರ್ಯಕ್ರಮ ಅಲ್ಲ ಅಂತ. ಬಡವರಿಗೆ ಸಹಾಯ ಮಾಡಲು ತಂದಿರೋ ಕಾರ್ಯಕ್ರಮ ಅದು ಅನುಷ್ಠಾನ ಮಾಡಿದ್ದೇವೆ. ಕಾರ್ಯಕರ್ತರಿಗೆ ಗೌರವ ಧನ ಅಂತ ಒಂದೆರಡು ಸಾವಿರ ಅಂತ ಕೊಡುತ್ತೇವೆ ಅಷ್ಟೇ. ಅದು ಬಿಟ್ಟು ಏನಿಲ್ಲ ಎಂದು ತಿಳಿಸಿದ್ದಾರೆ.