ಗದಗ :-ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ ಗ್ರಾಮದ ಶ್ರೀ ಶಂಕರಲಿಂಗ, ಗಡ್ಡಿ ಬಸವೇಶ್ವರ ಜಾತ್ರಾ ಮಹೋತ್ಸವವು ಅಪಾರ ಭಕ್ತಸಮೂಹದ ಮಧ್ಯೆ ನೆರವೇರಿತು.
ಪಾತ್ರೆ ತೊಳೆಯಲು ಸ್ಪಾಂಜ್ ಬಳಸ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು!
ಜಾತ್ರಾ ಮಹೋತ್ಸವದ ಹಿನ್ನೆಲೆ ಅಗ್ನಿಕುಂಡ ಹಾಯುವ ಮಹೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ ಸಾಸರವಾಡ ಗ್ರಾಮದ ಗಡ್ಡಿ ಬಸವೇಶ್ವರ ದೇವಸ್ಥಾನದಿಂದ ಹೊರಟ ವೀರಭದ್ರೇಶ್ವರನ ಪಲ್ಲಕ್ಕಿ ಮಹೋತ್ಸವವು ಪುರುವಂತರ ಕುಣಿತ, ಸಮ್ಮೇಳ, ನಂದಿಕೋಲು ಹಾಗೂ ಸುಮಂಗಲೆಯರ ಕಳಶ ಕನ್ನಡಿಯೊಂದಿಗೆ ವೈಭವಪೂರಿತ ಮೆರವಣಿಗೆಯು ಗಡ್ಡಿಯ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು.
ಈ ವೇಳೆ ಶಸ್ತ್ರಧಾರದೊಂದಿಗೆ, ವೀರಾವೇಶ ಕುಣಿತ ಹಾಕುತ್ತಾ ಪುರುವಂತರು ಹಾಗೂ ಗ್ರಾಮದ ಭಕ್ತರು ಪಲ್ಲಕ್ಕಿಯೊಂದಿಗೆ, ವೀರಭಧ್ರೇಶ್ವರ ದೇವಸ್ಥಾನದ ಎದುರಿನಲ್ಲಿ ಸಿದ್ಧಪಡಿಸಿದ ಅಗ್ನಿಕುಂಡ ಹಾಯುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಸಹಸ್ರಾರು ಭಕ್ತಾಧಿಗಳು ಆಗಮಿಸಿ, ಶಂಕರಲಿಂಗನ ಕೃಪೆಗೆ ಪಾತ್ರರಾದರು.