ಚಾಮರಾಜನಗರ : ಜಿಲ್ಲೆಯ ಬಂಡೀಪುರ ರೆಸಾರ್ಟ್ನಿಂದ ದಂಪತಿ ಅಪಹರಣ ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ. ಚಾಮರಾಜನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಕಿಡ್ನಾಪ್ ನಡೆದ 24 ಗಂಟೆಯೊಳಗೆ ಪ್ರಕರಣ ಭೇದಿಸಿದ್ದಾರೆ.
ನಿನ್ನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಿಡ್ನಾಪ್ ಪ್ರಕರಣ ನಡೆದಿತ್ತು. ಎರಡು ಕಾರಿನಲ್ಲಿ ಬಂದು ದಂಪತಿ ಹಾಗೂ ಮಗು ಅಪಹರಣ ಮಾಡಲಾಯಿತು. ಪೊಲೀಸರು ಕಾರ್ಯಾಚರಣೆ ನಡೆಸಿ, ಕಿಡ್ನಾಪ್ ಮಾಡಿದ್ದ ನಾಲ್ವರ ಬಂಧಿಸಿದ್ದು, ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ದಂಪತಿಗಳನ್ನು ಅಪಹರಿಸಿ ವಿಜಯಪುರ ಜಿಲ್ಲೆಯ ಶಿಂದಗಿ ತಾಲೂಕಿನ ಹೊನ್ನಹಳ್ಳಿ ತೋಟದ ಮನೆಯಲ್ಲಿದ್ದರು.
ಮಲ್ಲಿಕಾರ್ಜುನ, ಈರಣ್ಣ, ಸಿದ್ದರಾಮಯ್ಯ, ವಿಶ್ವನಾಥ್ ಬಂಧಿತ ಆರೋಪಿಗಳಾಗಿದ್ದು, ಪುನೀತ ಈರಣ್ಣ ಹಾಗೂ ನಿಶಾಂತ್ ನಡುವೆ ಹಣಕಾಸಿನ ವ್ಯವಹಾರವಿತ್ತು. ಇದೇ ಹಣಕಾಸಿನ ವ್ಯವಹಾಕ್ಕಾಗಿ ಕಿಡ್ನಾಪ್ ನಡೆದಿದೆ ಎನ್ನಲಾಗಿದೆ. ತಲೆ ಮರೆಸಿಕೊಂಡಿರುವ ಪುನೀತ್, ಹಾಗೂ ಆತನ ತಮ್ಮ ಸ್ನೇಹಿತ್ ಗಾಗಿ ಪೊಲೀಸರು ಹಡುಕಾಟ ನಡೆಸುತ್ತಿದ್ದಾರೆ.