ಹಾಸನ : ಚಲನಚಿತ್ರ ನಟರು, ಕಲಾವಿದರು ಸಿಟಿಜ಼ನ್ಸ್ ಆಗಿರ್ತರೆ, ಪ್ರೈವೇಟ್ ಸಿಟಿಜ಼ನ್ ಆಗಿರುತ್ತಾರೆ. ಹೋರಾಟದಲ್ಲಿ ಪಾಲ್ಗೊಳ್ಳಬೇಕು ಬೇಡವೋ, ಅವರು ತೀರ್ಮಾನ ಮಾಡಬೇಕಾಗುತ್ತದೆ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣ ದತ್ತ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಿನಿಮಾ ನಟರಿಗೆ ಡಿಸಿಎಂ ಡಿಕೆಶಿ ವಾರ್ನಿಂಗ್ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಭಾಗವಹಿಸಬೇಕೋ, ಬೇಡವೋ ಅವರ ಆಯ್ಕೆ. ಪಕ್ಷದಿಂದ ಆಗಿದ್ರೆ ಅವರ ಪಕ್ಷದವರೆಲ್ಲರೂ ಸೇರಿ ಹೋರಾಟ ಮಾಡುತ್ತಾರೆ. ಚಲನಚಿತ್ರದವರು ಯಾವುದೇ ಪಕ್ಷಕ್ಕೆ ಸೇರಿರಲ್ಲ. ಅವರನ್ನು ಬಂದಿಲ್ಲ ಎಂದು ಪ್ರಶ್ನೆ ಮಾಡುವುದು ಸೂಕ್ತವಲ್ಲ. ಅಧಿಕಾರದಲ್ಲಿರುವವರು ಸರ್ವಾಧಿಕಾರಿ ತರ ಘೋಷಣೆ ಮಾಡುವುದು ಕಡಿಮೆ ಮಾಡಬೇಕು. ಅದು ಅವರ ಅಹಂಕಾರ ತೋರಿಸುತ್ತೆ ಎಂದು ಪ್ರತಿಕ್ರಿಯಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿ ಆಡಳಿತದಲ್ಲಿ ಇರುವುದು ಕಾಂಗ್ರೆಸ್ ನೀವು ಅವರನ್ನು ಪ್ರಶ್ನೆ ಮಾಡಬೇಕು. ಅವರ ಪಕ್ಷದ ಒಳಗಡೆ ಏನು ನಡೆಯುತ್ತಿದೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ವಿರೋಧ ಪಕ್ಷವಾಗಿ ಅದರಲ್ಲಿ ನಮ್ಮ ಕೆಲಸವಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ವಾದ-ಸಂವಾದ ಅವರು ನಡೆಸುತ್ತಿರುವುದು. ಇಂತಹ ಬೆಳವಣಿಗಗಳು ಮೇಲ್ಪಟ್ಟದಲ್ಲಿ ನಡೆಯುತ್ತಿದೆ. ಅವರು ಒಳ್ಳೆಯ ಆಡಳಿತ ಕೊಡಬೇಕು. ಯಾರು ಮುಖ್ಯಮಂತ್ರಿ ಆಗಬೇಕು ಅಂತ ಅವರು ತೀರ್ಮಾನ ಮಾಡಬೇಕೆಂದರು.
ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ವಿಚಾರವಾಗಿ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಗಳು ಕಡಿಮೆ ಆಗಲ್ಲ ಅಂತ ಗೃಹಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಪ.ಜಾತಿ, ಪ.ಪಂಗಡಕ್ಕೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಸಮುದಾಯಕ್ಕೆ ಬಳಸಬಾರದು ಎಂದು 7D ರದ್ದು ಮಾಡಿದರು. 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಗ್ಯಾರೆಂಟಿ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದರು. 2023 ರಲ್ಲಿ ಎಸ್ಇಪಿ, ಟಿಎಸ್ಪಿ 11,144 ಸಾವಿರ ಕೋಟಿ ರೂ ದುರ್ಬಳಕ್ಕೆ ಮಾಡಿಕೊಂಡಿದ್ದಾರೆ. 2024 ರಲ್ಲಿ 14,282 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿದ್ದಾರೆ. ಎರಡು ವರ್ಷದಲ್ಲಿ ದುರ್ಬಳಕೆ ಮಾಡಿಕೊಂಡು ಗ್ಯಾರೆಂಟಿಗಾಗಿ ಬಳಸಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದರು.