ಗದಗ : ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗದ ಕುರಿತು ಸಂಸದ ಜಗದೀಶ್ ಶೆಟ್ಟರ್ ಹೇಳಿಕೆಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿರುಗೇಟು ನೀಡಿದ್ದಾರೆ. ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನಿರಬಹುದು. ಆದರೆ ಬರಗಾಲ ಬಿದ್ದು ಬರಗಾಲ ಪೂರ್ಣ ಹೋಗಿ ನಾವು ಸುಪ್ರೀಂಕೋರ್ಟ್ಗೆ ಹೋದಾಗ ಸಹಿತ ಪರಿಹಾರ ನೀಡದೇ ಇರೋರು ಶೆಟ್ಟರ್. ಎರಡು ತಿಂಗಳ ತಡ ಆಗಿದ್ದಕ್ಕೆ ಸರ್ಕಾಕ್ಕೆ ನೀವೇನು ಹಂಗಾತು ಹಿಂಗಾತು ಅನ್ನೋದಕ್ಕೆ ನೈತಿಕ ಹಕ್ಕಿದೆ. ಕರ್ನಾಟಕದ ಜನರ ಬಗ್ಗೆ ನಿಮಗೆ ಕಾಳಜಿ ಇದ್ರೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಯ್ತಲ್ಲ. ಯುಪಿ, ಬಿಹಾರಕ್ಕೆ ಎಷ್ಟು ಬರುತ್ತೆ. ಅದಕ್ಕೆ ದನಿ ಎತ್ತಿ, ಯಾಕೆ ಧ್ವನಿ ಎತ್ತಲು ಆಗ್ತಾ ಇಲ್ಲ..? ನೀವು ಕರ್ನಾಟಕದ ಹಿತ ಕಾಪಾಡ್ತೀರಾ ಎಂದ್ ಪ್ರಶ್ನಿಸಿದರು.
ಸಂಬಳ ಬರುವಂತೆಯೇ ರೆಗ್ಯುಲರ್ ಆಗಿ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಮುಟ್ಟಿಸಲು ಸರ್ವ ಪ್ರಯತ್ನ ಮಾಡುತ್ತೇವೆ. ಯಾವ ಕಾರಣಕ್ಕೂ ವಿಳಂಬ ಆಗದೇ ಇರೋ ಹಾಗೆ ನೋಡುತ್ತೇವೆ. ವಿಳಂಬ ಆಗಿದ್ರೆ ಸರಿದೂಗಿಸೋ ಕೆಲಸ ಮಾಡುತ್ತೇವೆ. ಕೆಲವು ತಾಂತ್ರಿಕ ತೊಂದರೆಯಿಂದ ಡಿಲೇ ಆಗಿದೆ. ಹಣದ ಅಭಾವದಿಂದ ಆಗಿಲ್ಲ ಎಂದರು.