ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಉಪ ಕುಲಸಚಿವರ ಸಹಿಯನ್ನೇ ಫೋರ್ಜರಿ ಮಾಡಲಾಗಿದೆ. ಡಿ. ಗ್ರೂಪ್ ನೌಕರ ವೈ.ಕೃಷ್ಣಮೂರ್ತಿ ವಿರುದ್ಧ ಉಪ ಕುಲಸಚಿವ ಸಹಿಯನ್ನ ನಕಲು ಮಾಡಿದ ಆರೋಪದಡಿ, ಆತನನ್ನು ಸಸ್ಪೆಂಡ್ ಮಾಡಲಾಗಿದೆ.
ವಿದ್ಯಾರ್ಥಿಗಳ ವಲಸೆ ಪ್ರಮಾಣ ಪತ್ರದಲ್ಲಿ ಪ್ರಭಾರಿ ಉಪ ಕುಲಸಚಿವ ಪ್ರೋ ನಿರ್ಮಲಾ ಎಂಬವರ ಸಹಿ ನಕಲು ಮಾಡಲಾಗಿದೆ. ಕೊಪ್ಪಳದ ಗಂಗಾವತಿಯ ಕೆಲ ವಿದ್ಯಾರ್ಥಿಗಳು ವಲಸೆ ಪ್ರಮಾಣ ಪತ್ರಕ್ಕೆ ವಿವಿಗೆ ಅರ್ಜಿ ಸಲ್ಲಿಸಿದ್ದರು. ಕೃಷ್ಣಮೂರ್ತಿ ನಕಲಿ ಸಹಿ ಬಳಸಿ ಪ್ರಮಾಣ ಪತ್ರ ನೀಡಿದ್ದಾರೆ. ಅರ್ಜಿ ಸತ್ಯಾಸತ್ಯತೆ ಪರಿಶೀಲನೆಗೆಂದು ವಿದ್ಯಾರ್ಥಿಗಳಿಗೆ ವಿಎಸ್ಕೆ ವಿವಿ ಸಿಬ್ಬಂದಿ ಕರೆ ಮಾಡಿದ್ದು, ಶುಲ್ಕ ಭರಿಸಿ ಸರ್ಟಿಫಿಕೇಟ್ ಪಡೆದು ಮಾಹಿತಿ ತಿಳಿಸಿದ್ದಾರೆ. ಈ ವೇಳೆವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಗೆ ಶುಲ್ಕ ಪಾವತಿಯಾಗದೆ ಪ್ರಮಾಣ ಪತ್ರ ವಿತರಣೆ ವಿತರಿಸುವುದು ಗೊತ್ತಾಗಿದ್ದು, ಕೃಷ್ಣಮೂರ್ತಿಯ ಸಹಿ ಕಳ್ಳಾಟ ಬಟಾಬಯಲಾಗಿದೆ. ವಿಎಸ್ಕೆ ವಿವಿ ಕುಲಸಚಿವ ರುದ್ರೇಶ್ ಅವರು ಡಿ.ಗ್ರೂಪ್ ನೌಕರ ಕೃಷ್ಣಮೂರ್ತಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.