ವಿಜಯಪುರ : ದೆಹಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ವಿಜಯಪುರ ದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರಿಗೆ ಮೊದಲಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಸ್ವಾತಂತ್ರ್ಯ ಬಂದು 75 ವರ್ಷದ ಇತಿಹಾಸದಲ್ಲಿ ಕೇಜ್ರೀವಾಲ್ ಎಂಬ ಒಬ್ಬ ವ್ಯಕ್ತಿ. ಆಮ್ ಆದ್ಮಿ ಎಂಬ ಪಕ್ಷ ಹುಟ್ಟು ಹಾಕಿ ದೇಶದ ಚುನಾವಣಾ ವ್ಯವಸ್ಥೆ ಬುಡಮೇಲು ಮಾಡಿದ್ದರು. ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿದ ಮಹಾ ದ್ರೋಹಿ ಕೇಜ್ರೀವಾಲ್. ಇಡೀ ಪ್ರಪಂಚದಲ್ಲಿ ಯಾವುದೇ ಸರ್ಕಾರ ಮಾಡದಿರುವಷ್ಟು ಬ್ರಷ್ಟಾಚಾರ ಮಾಡಿ ಜೈಲಿಗೆ ಹೋದರು. ಜೈಲಿನಲ್ಲೆ ಕುಳಿತು, ರಾಜಿನಾಮೆ ನೀಡದೇ ಆಡಳಿತ ಮಾಡಿದ ಸಂವಿಧಾನದ ದ್ರೋಹಿ ಅವರು. ಬಡ ಬಗ್ಗರು ಇಂದು ದೆಹಲಿಯಲ್ಲಿ ರಸ್ತೆಯ ಮೆಲೆಯೇ ಇದ್ದಾರೆ. ಹಗಲು ದರೋಡೆ ಮಾಡಿದ ಒಬ್ಬ ಹೀನ ಮನಸ್ಥಿತಿಯ ರಾಜಕಾರಣಿ ಕೇಜ್ರೀವಾಲ್. ದೆಹಲಿಯ ಜನರು ಕೇಜ್ರೀವಾಲ್ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಹೆಚ್ಚು ಟ್ಯಾಕ್ಸ್ ಬರುವ ಪ್ರದೇಶದಲ್ಲಿ ಹೆಚ್ಚು ಅಭಿವೃದ್ಧಿ ಮಾಡಬೇಕಿತ್ತು, ಆದರೆ ಅಲ್ಲಿ ಓಡಾಡಲು ಆಗದ ಸ್ಥಿತಿ ಇದೆ. ಸರ್ಕಾರದ ಖಜಾನೆ ಹಗಲು ದರೋಡೆ ಮಾಡಿದ್ದಾರೆ ಎಂದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಶಿಸಿ ಹೋಗುವ ಪರಿಸ್ಥಿತಿ ಬರುತ್ತದೆ ಎಂದರು.
ದೆಹಲಿಯಲ್ಲಿ ರೆಬೆಲ್ಸ್ ಟೀಂಗೆ ಅವಮಾನ ; ರೆಬಲ್ ನಾಯಕ ಯತ್ನಾಳ್ ಹೇಳಿದಿಷ್ಟು..?
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಪಕ್ಷದ ವ್ಯವಸ್ಥೆಯಲ್ಲಿ ಇದ್ದೇವೆ. ಪಕ್ಷದ ನಿರ್ಣಯವೇ ಅಂತಿಮ, ಈ ಸಮಸ್ಯೆ ಸರಿ ಮಾಡುವ ಕೆಲಸ ದೆಹಲಿ ನಾಯಕರು ಮಾಡುತ್ತಾರೆ. ನಮ್ಮದೊಂದು ರಾಷ್ಟ್ರೀಯ ಪಕ್ಷ ನಾನೇನು ಯಾರಿಗೂ ಸಲಹೆ ಕೊಡಲ್ಲ ಎಂದರು