ಬೆಂಗಳೂರು:- ತಡರಾತ್ರಿ ಬೆಂಗಳೂರಲ್ಲಿ ಸರಣಿ ಕಳ್ಳತನವಾಗಿದೆ. ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ನಡೆದಿದ್ದು, ಬೆಂಗಳೂರಿನ ಚೋಳೂರುಪಾಳ್ಯ ಮುಖ್ಯ ರಸ್ತೆಯಲ್ಲಿ ಘಟನೆ ಜರುಗಿದೆ.
ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ; ಬುದ್ದಿಮಾಂಧ್ಯೆ ಮೇಲೆ ಅತ್ಯಾಚಾರ
ಒಂದು ಮೆಡಿಕಲ್ , ಒಂದು ಬೇಕರಿ, ಹಾಗು ನಂದಿನಿ ಪಾರ್ಲರ್ ನಲ್ಲಿ ಕಳ್ಳತನವಾಗಿದೆ. ವಿಶ್ವ ಮೆಡಿಕಲ್ ಗಲ್ಲದಲ್ಲಿದ್ದ ಲಕ್ಷಾಂತರ ರೂ ನಗದು ಕಳ್ಳತನ ಮಾಡಲಾಗಿದ್ದು, ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇನ್ನೂ ಘಟನೆಯಿಂದ ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ. ನೈಟ್ ರೌಂಡ್ಸ್ ಬಿಟ್ಟು ನಿದ್ದೆ ಮಾಡ್ತಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನೈಟ್ ಬೀಟ್ ಮಾಡೋದನ್ನೆ ಮರೆತರ ಖಾಕಿ ಪೊಲೀಸ್ ಠಾಣೆ ಸುತ್ತಮುತ್ತ ಕಳ್ಳತನ ನಡೆದರೂ ಪೊಲೀಸ್ ನವರು ಏನು ಮಾಡುತ್ತಿದ್ದಾರೆ.
ರಸ್ತೆ ಪಕ್ಕ ಇರುವ ಅಂಗಡಿ ಕಳ್ಳತನ ಮಾಡಿದ್ರು ಪೊಲೀಸರಿಗೆ ಗೊತ್ತಾಗಿಲ್ವಾ!? ಅಥವಾ ಗೊತ್ತಿದ್ದೂ ಸುಮ್ಮನೆ ಇದ್ದಾರಾ ಎಂಬ ಪ್ರಶ್ನೆ ಮೂಡಿದೆ.