ಸೂರತ್:- ಗುಜರಾತ್ನ ಸೂರತ್ನಲ್ಲಿ ಎರಡು ವರ್ಷದ ಬಾಲಕ ಮ್ಯಾನ್ಹೋಲ್ಗೆ ಬಿದ್ದಿರುವ ಘಟನೆ ಜರುಗಿದೆ.
ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು..?
ಪ್ರಾಥಮಿಕ ಮಾಹಿತಿ ಪ್ರಕಾರ, ಮ್ಯಾನ್ಹೋಲ್ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರೀ ವಾಹನವೊಂದು ಮ್ಯಾನ್ಹೋಲ್ ಮುಚ್ಚುಳಕ್ಕೆ ಹಾನಿ ಮಾಡಿತ್ತು. 100-150 ಮೀಟರ್ ಪ್ರದೇಶದ ಸುತ್ತಲೂ ಪರಿಶೀಲಿಸಿದ್ದೇವೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪಾರಿಖ್ ತಿಳಿಸಿದ್ದಾರೆ.
ಮಗುವನ್ನು ರಕ್ಷಿಸಲು ಸಮಯ ತೆಗೆದುಕೊಳ್ಳುತ್ತದೆ, 60-70 ಕಾರ್ಮಿಕರನ್ನು ಇಲ್ಲಿ ನಿಯೋಜಿಸಲಾಗಿದೆ.