ವಿಜಯಪುರ : ವಿಜಯಪುರದಲ್ಲಿ ಕಳೆದ ಕೆಲ ದಿನಗಳಿಂದ ಮುಸುಕುಧಾರಿ ಗ್ಯಾಂಗ್ ನ ಹಾವಳಿ ಜೋರಾಗಿತ್ತು. ಇದೀಗ ಇದೇ ಮುಸುಕುಧಾರಿ ಗ್ಯಾಂಗ್ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ.
ನಗರದ ಜೈನಾಪುರ ಲೇಔಟ್ನ ಸಂತೋಷ್ ಕನ್ನಾಳ ಮೃತಪಟ್ಟಿದ್ದಾರೆ. ಕಳೆದ ಜ.16ರಂದು ಸಂತೋಷ್ ಮನೆಗೆ ದರೋಡೆ ಕೋರರು ನುಗ್ಗಿದ್ದು, ಈ ವೇಳೆ ಅವರೊಂದಿಗೆ ಸಂತೋಷ್ ಹೋರಾಟ ನಡೆಸಿದರು. ಆಗ ದರೋಡೆಕೋರರು ಸಂತೋಷ್ ಅವರಿಗೆ ಚಾಕುವಿನಿಂದ ಇರಿದು, ಮೊದಲನೇ ಮಹಡಿಯಿಂದ ಕೆಳಗೆ ಎಸೆದು, ಅವರ ಪತ್ನಿಯ ಕೊರಳಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಕೂಡಲೇ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಂತೋಷ್ ಅವರಿಗೆ ಕಿಡ್ನ ಸೋಂಕು ಕೂಡ ಇತ್ತು ಎನ್ನಲಾಗಿದೆ.