ಪತ್ನಿ ಕಿರುಕುಳದಿಂದ ಮನನೊಂದು ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚೆಲುವೆ ಕಂಗನಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಅತ್ಯಾಚಾರ ಕೇಸ್: ಜೈಲಿಂದ ರಿಲೀಸ್ ಆಗುತ್ತಿದ್ದಂತೆ ಸಂತ್ರಸ್ತೆ ಕೊಂದ ಪಾಪಿ!
ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಕಂಗನಾ, ಈ ರೀತಿಯ ಪ್ರಕರಣದ ಬಗ್ಗೆ ನಿರಂತರ ಪರಿಶೀಲನೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ಶೇ.99ರಷ್ಟು ಪುರುಷರು ತಪ್ಪಿತಸ್ಥರು ಅಂತ ಹೇಳಿ ಮತ್ತೊಂದು ಚರ್ಚೆಗೆ ಕಾರಣರಾಗಿದ್ದಾರೆ.
ಅತುಲ್ ಅವರ ವಿಡಿಯೋ ಹೃದಯವಿದ್ರಾವಕವಾಗಿದೆ. ಇಡೀ ದೇಶ ಆಘಾತದಲ್ಲಿದೆ. ಮದುವೆಯು ನಮ್ಮ ಭಾರತೀಯ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿರುವವರೆಗೂ ಅದು ಉತ್ತಮವಾಗಿದೆ. ಆದರೆ ಕಮ್ಯುನಿಸಂ, ಸಮಾಜವಾದ ಮತ್ತು ಸ್ತ್ರೀವಾದದ ಧೋರಣೆಗಳು ಮದುವೆಯ ಸಾಂಪ್ರದಾಯಿಕತೆಯ ಹಳಿ ತಪ್ಪಿಸುತ್ತವೆ. ನಕಲಿ ಸ್ತ್ರಿವಾದ ಖಂಡನೀಯ. ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಲಾಗುತ್ತಿತ್ತು. ಶೇಕಡ 99ರಷ್ಟು ಮದುವೆಗಳಲ್ಲಿ ಪುರುಷರ ತಪ್ಪೇ ಹೆಚ್ಚಿರುತ್ತದೆ. ಹಾಗಾಗಿಯೇ ಇಂತಹ ತಪ್ಪುಗಳು ನಡೆಯುತ್ತವೆ ಎಂದು ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.