ಹುಬ್ಬಳ್ಳಿ: ಇಲ್ಲಿನ ಪೂರ್ವ ಕ್ಷೇತ್ರದ ವಾರ್ಡ್ ಸಂಖ್ಯೆ 62ರಲ್ಲಿ ಬರುವ ಮಂಟೂರ ರಸ್ತೆ ದಸ್ತಗಿರಿ ಕಾಲೋನಿಯಲ್ಲಿ ತೆರದ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೂರ್ವ ಕ್ಷೇತ್ರದಲ್ಲಿ ಮಂಟೂರ ರಸ್ತೆ ಭಾಗವಕ್ಕೆ ಅತ್ಯದಿಕ ಅನುದಾನದಲ್ಲಿ ಅಭಿವೃದ್ಧಿಕಾರ್ಯ ಮಾಡಲಾಗಿದೆ. ಅದರಂತೆ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.
Passion Fruit Benefits: ಪ್ಯಾಶನ್ ಫ್ರೂಟ್ ಹಣ್ಣಿನ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?
ಇನ್ನು ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಗಮನ ಹರಸಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಕಾಂಗ್ರೆಸ್ ಅಧ್ಯಕ್ಷರಾದ ಶರೀಫ್ ಅದ್ವಾನಿ, ಮುಖಂಡರಾದ ಶರೀಫ್,ಅಶ್ಪಾಕ್ ಇಸಾದಾ, ಜಾಫರ್ ಶಾಬ್ದಿ, ಸುಮಿತ್ರಾ ಪೀಟರ್, ಅಕ್ಬರ್ ಅಂಗಡಿ, ನೂರ್, ರಿಯಾಜ್, ರಸೂಲ್, ನಸೀಮಾ, ವಹಾಬ್, ಜೈಲಾನಿ ಸೇರಿದಂತೆ ಅನೇಕರಿದ್ದರು.