ವಿಜಯಪುರ: ರಾಜ್ಯದಲ್ಲಿ ಜಾತಿ ಗಣತಿ ಜಾರಿಗೆ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಇತ್ತ ವಿಜಯಪುರದಲ್ಲಿ ಜಿಲ್ಲಾ ಶೋಷಿತ ಸಮುದಾಯದ ಮುಖಂಡರ ಸಭೆ ಮಾಡುವ ಮೂಲಕ ಜಾತಿ ಗಣತಿ ಜಾರಿಗೆ ಬೆಂಬಲಿಸಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ವಿಜಯಪುರ ನಗರದ ಖಾಸಗಿ ಹೊಟೇಲ್ ನಲ್ಲಿ ವಿಜಯಪುರ ಜಿಲ್ಲೆಯ ಶೋಷಿತ ಸಮುದಾಯದ ಮುಖಂಡರ ಪಕ್ಷಾತೀತವಾಗಿ ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು ಜೊತೆಗೆ ಶೋಷಿತ ಸಮುದಾಯದ ವಿವಿಧ ಮುಖಂಡರು ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ರು. ಸಭೆಯಲ್ಲಿ ಪಕ್ಷಾತೀತವಾಗಿ ಶೋಷಿತ ಸಮುದಾಯಗಳು ಜಾತಿ ಗಣತಿ ಜಾರಿಗೆ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಂದಲೇ ಮಾತ್ರ ಜಾತಿ ಗಣತಿ ಜಾರಿ ಆಗಲು ಸಾಧ್ಯ. ಜಾತಿ ಗಣತಿ ಜಾರಿಗೆ ಮೇಲ್ವರ್ಗದ ಮುಖಂಡರು, ಸಚಿವರು, ಶಾಸಕರು ವಿರೋಧಿಸೋದು ಸರಿಯಲ್ಲ. ಅಹಿಂದ ವರ್ಗದ ಮತಗಳನ್ನು ಪಡೆದು ಇದೀಗ ಜಾತಿ ಗಣತಿ ಜಾರಿ ವಿಚಾರದಲ್ಲಿ ಅಹಿಂದ ವರ್ಗದ ಅಭಿವೃದ್ಧಿಗೆ ವಿರೋಧಿಸುತ್ತಿದ್ದು,
ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಬಂಪರ್ ಯೋಜನೆ! ಕಡಿಮೆ ಸಮಯ, ಹೆಚ್ಚು ಲಾಭ!
ಜಾತಿ ಗಣತಿ ಜಾರಿಗೆ ಬೆಂಬಲಿಸಿ ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಅಹಿಂದ ಮತದಾರರು ತಮಗೆ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜಾತಿ ಗಣತಿ ಜಾರಿಗೆ ಬದ್ಧ ಎಂದಿತ್ತು, ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಜಾತಿ ಗಣತಿ ಪರವಾಗಿದ್ದಾರೆ, ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಜಾತಿ ಗಣತಿ ಜಾರಿಗೆ ಮುಂದಾಗಬೇಕು,
ಅದಕ್ಕೆ ಅಹಿಂದ ವರ್ಗದವರ ಬೆಂಬಲವಿದೆ ಎಂದ್ರು. ಶೋಷಿತ ಸಮುದಾಯದ ಮುಖಂಡರ ನಿಯೋಗ ಜಾತಿ ಗಣತಿ ಜಾರಿಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಳ್ಳಲಿದೆ. ಜೊತೆಗೆ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದು ವಿವಿಧ ಸಮುದಾಯದ ಮುಖಂಡರು ಅಭಿಪ್ರಾಯ ಹಂಚಿಕೊಂಡ್ರು. ಸಭೆಯಲ್ಲಿ ಮಾಜಿ ಶಾಸಕರಾದ ಕಾಂಗ್ರೆಸ್ ನ ರಾಜು ಆಲಗೂರ, ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಚವ್ಹಾಣ್, ಶರಣಪ್ಪ ಸುಣಗಾರ,ಬಿಡಿ ಪಾಟೀಲ್, ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರಿದ್ದರು…