ಬೆಂಗಳೂರು: ಅದು ಕೆರೆ ಪಕ್ಕ ಇರೊ ನಿರ್ಜನ ಪ್ರದೇಶ ಸುತ್ತಾ ಎಲ್ಲಿ ನೋಡಿದ್ರು ನೀಲಿಗಿರಿ ತೋಪು..ಅದೇ ತೋಪಿನಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಸ್ಥಳೀಯರಿಗೆ ಕಾಣಿಸಿತ್ತು..ಪತಿ ಸಾವಿನ ಸುದ್ದಿ ತಿಳಿದು ಪತ್ನಿ ಓಡೋಡಿ ಬಂದಿದ್ಳು..ಮೃತದೇಹ ತಬ್ಬಿ ಕಣ್ಣೀರು ಸುರಿಸಿದ್ಳು..ಆದ್ರೆ ತನಿಖೆಗೆ ಇಳಿದ ಪೊಲೀಸರು ಅಸಲಿ ವಿಷಯ ಬಯಲು ಮಾಡಿದ್ರು.ಹಾಗಾದ್ರೆ ಹೆಂಡತಿ ಹಿಂದೆ ಹೊರಟ ಪತಿಗೆ ಏನಾಗಿತ್ತು ಅನ್ನೋದರ ಕಂಪ್ಲೀಟ್ ಡಿಟೇಲ್ಸ್. ಹೌದು…ಹೀಗೆ ಸೆರಗು ಸುತ್ತಿಕೊಂಡು ಮಳ್ಳಿ ರೀತಿ ಪೊಲೀಸ್ ಠಾಣೆಯಲ್ಲಿ ನಿಂತವಳ ಹೆಸರು..ನಾಗರತ್ನ..ಇನ್ನೂ ಹೀಗೆ ಹೆಣವಾಗಿ ಬಿದ್ದಿರುವವನ ಹೆಸರು ತಿಪ್ಪೇಶ..ನಾಗರತ್ನನ ಪತಿ..
ಬಳ್ಳಾರಿ ಜಿಲ್ಲೆ ,ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ಕಳೆದ ಕೆಲ ದಿನಗಳ ಹಿಂದೆ ಭೋಗನಹಳ್ಳಿಗೆ ಬಂದು ಗಾರ್ಡನರ್ ಆಗಿ ಕೆಲಸ ಮಾಡಿಕೊಂಡು..ಇಲ್ಲಿ ಕಾಣ್ತಿರುವ ಲೇಬರ್ ಶೆಡ್ ನಲ್ಲಿ ಇಬ್ಬರು ಮಕ್ಕಳ ಜೊತೆಗೆ ವಾಸ ಮಾಡಿಕೊಂಡಿದ್ರು..ಆದ್ರೆ ಅದೆಲ್ಲ ಹಳೆ ಸಂಬಂಧ ಬಿಡಿ ಈಗ ಈ ನಾಗರತ್ನ ಇಲ್ಲಿ ತುಟಿ ಊದಿಸಿಕೊಂಡು ನಿಂತಿರೊ ರಾಮ್ ನ ಮನದರಸಿ..ಹೃದಯ ಕದ್ದ ಚಿತ್ತ ಚೋರಿ..ಅಷ್ಟಕ್ಕೂ ಈ ಆಸಾಮಿ ಬೇರಾರು ಅಲ್ಲ ನಾಗರತ್ನನ ಅಕ್ಕನ ಗಂಡ ಅರ್ಥಾತ್ ಭಾವ ಆಗಬೇಕು..
ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
ಹೌದು..ಗಾರ್ಡನರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರತ್ನಗೆ ಈ ರಾಮ್ ಅಂದ್ರೆ ಅದೇನೊ ಸೆಳೆತ..ಹಾಗಾಗಿ ಗಂಡನಿಗೆ ಗೊತ್ತಿಲ್ಲದಂತೆ ಭಾವನ ಜೊತೆಗೆ ಚಕ್ಕಂದ ಶರು ಇಟ್ಟುಕೊಂಡಿದ್ಳು..ಈ ಕಳ್ಳ ಸಂಬಂಧವನ್ನ ಎಷ್ಟು ದಿನ ಅಂತಾ ಬಚ್ಚಿಡೋಕೆ ಸಾಧ್ಯ ಹೇಳಿ ಒಂದಿನ ಗಂಡನಿಗು ವಿಚಾರ ಗೊತ್ತಾಗಿ ಪತ್ನಿಗೆ ಬುದ್ಧಿ ಹೇಳಿದ್ದ..ಮತ್ತೆ ಚಾಳಿ ಮುಂದುವರೆಸಿದಾಗ..ಬೈಯೋದನ್ನು ಮಾಡ್ತಿದ್ದ..ಇದು ನಾಗರತ್ನಗೆ ಹಿಂಸೆ ಅನಿಸಿತ್ತು ಹಾಗಾಗಿ..ಭಾವನಿಗೆ ಹೇಳಿ ಒಂದು ಗತಿ ಕಾಣಿಸೋಕೆ ಮುಂದಾಗಿದ್ದಾಳೆ..ಈತನನ್ನ ಕೊಂದು ನನ್ನ ಕರೆದುಕೊಂಡು ಹೋಗು ಅಂತಾ ಪ್ರಿಯತಮನಿಗೆ ಹೇಳಿದ್ದಾಳೆ..ಈ ಜೀವ ನಿನಗಾಗಿ ಅಂತಾ ಬಳ್ಳಾರಿ ಯಿಂದ ಬಂದ ರಾಮ್ ಪ್ಲಾನ್ ನಂತೆಯೇ ಕೊಲೆ ಮಾಡಿ ಮುಗಿಸಿದ್ದಾನೆ…
ಅಕ್ಟೋಬರ್ 14 ರ ಬೆಳಗ್ಗೆ 11 ಗಂಟೆಯ ಸಮಯ…ಲೇಬರ್ ಶೆಡ್ ಖಾಲಿ ಮಾಡೋಕೆ ಮಾಲೀಕರು ಸೂಚನೆ ಕೊಟ್ಟಿದ್ರು ಹಾಗಾಗಿ ಕೆಲಸ ಮಾಡ್ತಿದ್ದ ಜಾಗದಿಂದ ಹಣ ತರೋಕೆ ಅಂತಾ ಗಂಡ ಹೆಂಡತಿ ಕೆರೆ ದಾಟಿ ನೀಲಗಿರಿ ತೋಪಿನತ್ತ ಹೆಜ್ಜೆ ಇಟ್ಟಿದ್ರು ಈ ವೇಳೆ ಮೂತ್ರ ವಿಸರ್ಜನೆಗೆ ಹೋಗಬೇಕು ಅಂತಾ ಪತ್ನಿ ಸ್ವಲ್ಪ ಪಕ್ಕಕ್ಕೆ ಹೋಗಿದ್ದಾಳೆ..ಈ ವೇಳೆ ಅಲ್ಲೇ ಅವಿತಿದ್ದ ನಾಲ್ವರು ಹಂತಕರು ತಿಪ್ಪೇಶನ ಮೇಲೆ ಎರಗಿದ್ದಾರೆ..ದೊಣ್ಣೆಯಿಂದ ಹೊಡೆದು,ಮರ್ಮಾಂಗಕ್ಕೆ ಒದ್ದು..ದೊಣ್ಣೆಯಿಂದ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾರೆ..
ಎಲ್ಲಾ ಕಣ್ಣೆದುರೆ ಕಂಡ ನಾಗರತ್ನ ತನಗೇನು ಗೊತ್ತೇ ಇಲ್ಲ ಅನ್ನುವಂತೆ ಶೆಡ್ ಸೇರಿದ್ಳು..ಸ್ಥಳೀಯರು ಬಂದು ವಿಚಾರ ಮುಟ್ಟಿಸ್ತಿದ್ದಂತೆ ಓಡೋಡಿ ಹೋಗಿ ಗೋಳಾಡ ತೊಡಗಿದ್ಳು..ಅಲ್ಲದೇ ಕೊಲೆ ವಿಚಾರವಾಗಿ ತಾನೇ ಬೆಳ್ಳಂದೂರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ಳು..ಅನುಮಾನ ಗೊಂಡು ವಿಚಾರಸಿದ ಪೊಲೀಸರಿಗೆ ಅಸಲಿ ಸಂಗತಿ ಗೊತ್ತಾಗಿದೆ..ಭಾವನ ಜೊತೆಗಿನ ಅನೈತಿಕ ಸಂಬಂಧ ಹಿನ್ನಲೆ ಪತ್ನಿಯೇ ಪತಿಗೆ ಚಟ್ಟ ಕಟ್ಟಿರೋದು ಗೊತ್ತಾಗಿದೆ..ಸದ್ಯ ಮೃತ ತಿಪ್ಪೇಶ ಪತ್ನಿ ನಾಗರತ್ನ ಪ್ರಿಯಕರ ಭಾವ ರಾಮ್, ಸ್ನೇಹಿತರಾದ ಶಶಿಕುಮಾರ್ ,ಚಿನ್ನ ಮತ್ತು ಸುರೇಶ್ ನನ್ನ ಬಂಧಿಸಿದ್ದಾರೆ.. ಅದೇನೇ ಹೇಳಿ ಪತಿ ಜೊತೆಗೆ ಇರಲು ಇಷ್ಟವಿಲ್ಲದಿದ್ದಿದ್ರೆ ವಿಚ್ಛೇದನ ಪಡೆದು ದೂರ ಇರಬಹುದಿತ್ತು..ಆದರೆ ಈಕೆಯ ಕೆಟ್ಟ ನಿರ್ಧಾರದಿಂದ ಪತಿ ಸಾವನ್ನಪ್ಪಿದ್ದು ತಾನು ಜೈಲು ಸೇರಿದ್ದಾಳೆ..ಏನು ಅರಿಯದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿರೋದು ಮಾತ್ರ ನಿಜಕ್ಕೂ ವಿಪರ್ಯಾಸ..