ಹುಬ್ಬಳ್ಳಿ:ದೇಶದಲ್ಲಿರುವುದು ಅಂಬೇಡ್ಕರ್ ವಿರಚಿತ ಸಂವಿಧಾನವೇ ಹೊರತು, ಷರಿಯಾ ಕಾನೂನಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಹೇಳಿದರು. ಇತ್ತೀಚೆಗೆ ವಿಜಯಪುರಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ 15 ದಿನಗಳ ಒಳಗೆ ವಕ್ಫ್ ಆಸ್ತಿ ನೋಂದಣಿಗೆ ಜಿಲ್ಲಾಡಳಿತವನ್ನು ಒತ್ತಾಯಿಸಿರುವುದರ ಉದ್ದೇಶ ಹಿಂದೂ ರೈತರ ಭೂಮಿಯನ್ನು ಕಿತ್ತುಕೊಂಡು, ಅವರನ್ನು ಬೀದಿಪಾಲು ಮಾಡುವುದೇ ಆಗಿದ್ದುಸಚಿವರ ಈ ಕಿತಾಪತಿಯಿಂದಾಗಿ ತಲತಲಾಂತರದಿಂದಲೂ ಕೃಷಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ವಿಜಯಪುರ,
ಕಲಬುರಗಿ, ಯಾದಗಿರಿ ಜಿಲ್ಲೆಗಳ ರೈತರು ಈ ತಮ್ಮ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.ವಕ್ಫ್ ಮಂಡಳಿಯು ವಿಜಯಪುರ ಜಿಲ್ಲೆಯೊಂದರಲ್ಲೇ 15,000 ಎಕರೆಗೂ ಅಧಿಕ ಕೃಷಿಭೂಮಿಯನ್ನು ಅಕ್ರಮವಾಗಿ ತನ್ನದೆಂದು ಘೋಷಣೆ ಮಾಡುತ್ತಿದೆ.ದೇಶದ ಸಂಸತ್ ಭವನವೇ ತಮ್ಮದೆಂದು ಹೇಳಿಕೊಂಡು ತಿರುಗುವ ವಕ್ಫ್ ಮಂಡಳಿ, ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಬಡರೈತರ ಜಮೀನಿನ ಮೇಲೂ ತನ್ನ ವಕ್ರದೃಷ್ಟಿ ಬೀರಿದೆ.
ʼPAN CARDʼ ನಲ್ಲಿ ಹೆಸರು, ವಿಳಾಸ ತಪ್ಪಾಗಿದೆಯೇ.? ಮನೆಯಲ್ಲೇ ಕುಳಿತು ಸುಲಭವಾಗಿ ತಿದ್ದುಪಡಿ ಮಾಡಿ
ದೇಶದ ಎಲ್ಲಾ ಆಸ್ತಿಯನ್ನು ವಕ್ಫ್ ಕಬಳಿಸುತ್ತಿದ್ದರೆ, ಖರ್ಗೆಯವರ ಕುಟುಂಬ ವಕ್ಫ್ ಆಸ್ತಿಯನ್ನೇ ನುಂಗಿಹಾಕಿದೆ. ಅಂತವರಿಗೆ ನೋಟಿಸ್ ನೀಡದ ರಾಜ್ಯ ಸರ್ಕಾರ, ಬಡ ರೈತರ ಮೇಲೆ ಏಕಾಏಕಿ ನೋಟಿಸ್ ನೀಡಿ, ದೌರ್ಜನ್ಯ ಎಸಗುತ್ತಿರುವುದು ಖಂಡನೀಯ ಎಂದಿರುವ ಅವರುಹೀಗೆ ತರಾತುರಿಯಲ್ಲಿ ರೈತರ ಭೂಮಿಯನ್ನು ಕಿತ್ತುಕೊಂಡು, ವಕ್ಫ್ ಬೋರ್ಡಿಗೆ ನೀಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು.
ದೇಶದಲ್ಲಿರುವುದು ಅಂಬೇಡ್ಕರ್ ವಿರಚಿತ ಸಂವಿಧಾನವೇ ಹೊರತು, ಷರಿಯಾ ಕಾನೂನಲ್ಲ. ಕನ್ನಡನಾಡನ್ನೇ ಒಂದು ಸಮುದಾಯಕ್ಕೆ ಮಾರಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ, ಕನ್ನಡಿಗರು ಮತ್ತು ನಾಡಿನ ಅನ್ನದಾತರೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು