ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಅಕ್ರಮ ಮಾವಾ ತಯಾರಿಸುವ ಘಟಕದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ದಯಾನಂದ ಸೋಮಲಿಂಗ ಕರೆಯಣ್ಣವರ ಜಿಲ್ಲಾ ಆರೋಗ್ಯ ಅಧಿಕಾರಿ. ಗೈಬುಸಾಬ ಗಲಗಲಿ ತಾಲೂಕ ಆರೋಗ್ಯ ಅಧಿಕಾರಿ.
ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ನೇತೃತ್ವದಲ್ಲಿ ಬನಹಟ್ಟಿಯ ಗಾಂಧಿ ವೃತ್ತದ ಬಳಿ ಪ್ರತ್ಯೇಕ ಎರಡು ಕಡೆ ದಾಳಿ ನಡೆಸಿದ್ದಾರೆ.
ದಾಳಿ ಮಾಡಿದ ಸಮಯದಲ್ಲಿ ಮಿಶ್ರಣ ಮಾಡುವ ಐದು ಯಂತ್ರ. ಅಡಿಕೆ ಪುಡಿ. ಕಲಬೆರಿಕೆ ತಂಬಾಕು. ಸುಣ್ಣ ಮಾವಾ ಪ್ಯಾಕೆಟ್ಗಳು ಸೇರಿ ಎರಡು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ (೧) ಅಸ್ಲಂ ನೂರದಿನ ಚಿಂಚಲಿ (೨)ಮುಸ್ತಾಕ್ ಹಲಗಲಿ (೩) ಮಂಜುನಾಥ ಮಾಂತೇಶ ಬಡಿಗೇರ (೪)ಇಸಾಕ್ ಮಾಲದಾರ ಈ ನಾಲ್ಕು ಜನ ಆರೋಪಿಗಳ ವಿರುದ್ಧ ಕೋಟ್ಪಾ ಕಾಯ್ದೆಅಡಿಯಲ್ಲಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಬಕವಿ ಬನಹಟ್ಟಿ ರಾಂಪುರ ಹೋಸುರ ನಗರಗಳಲ್ಲಿ ಇನ್ನೂ ಹಲವಾರು ಕಲಬೆರಿಕೆ ಮಾಡಿ ತಯಾರಿಸುವ ಅಕ್ರಮವಾಗಿ ಮಾವಾ ಯಂತ್ರದ ಘಟಕಗಳು ಇವೆ ಅವುಗಳನ್ನು ಆದಷ್ಟು ಬೇಗನೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆಂದು ಸ್ಥಳೀಯರು ಆಗ್ರಹಿಸಿದರೆ.
ಇದೇ ಸಂದರ್ಭದಲ್ಲಿ ಶಶಿಕಾಂತ ಕುಮಟಳ್ಳಿ. ಎಎಸ್ಐ ಕಲ್ಲಪ್ಪ ಸವದತ್ತಿ. ಪುಂಡಲಿಕ ಗಣಿ. ಆನಂದ ಕೋಲೂರ. ಬೈರು ಚೌಲಗಿ. ಮಾಯಪ್ಪ ಸನದಿ. ಶ್ರೀಮಂತ ಹುಕ್ಕೇರಿ. ಎಮ್ ಡಿ ಸವದಿ. ಸದಾಶಿವ ಬಡ್ಡೂರ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಇದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ